Monday, May 6, 2024
Homeಅಪರಾಧಮಂಗಳೂರು : ಐವನ್ ಡಿಸೋಜ ಮನೆಗೆ ಬಜರಂಗದಳ ಕಾರ್ಯಕರ್ತರಿಂದ ಮುತ್ತಿಗೆ!

ಮಂಗಳೂರು : ಐವನ್ ಡಿಸೋಜ ಮನೆಗೆ ಬಜರಂಗದಳ ಕಾರ್ಯಕರ್ತರಿಂದ ಮುತ್ತಿಗೆ!

spot_img
- Advertisement -
- Advertisement -

ಮಂಗಳೂರು : ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಅವರ ಮನೆಗೆ ಬಜರಂಗದಳ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಬುಧವಾರ ನಡೆದಿದೆ.

ಕೇಸರಿ ಬಟ್ಟೆ ಹಾಕಿದ ಬಜರಂಗದಳ ಕಾರ್ಯಕರ್ತರು ಸುಲಿಗೆ ಮಾಡುವವರು, ಸಮಾಜದ್ರೋಹಿಗಳು ಎಂದು ಇತ್ತೀಚೆಗೆ ಐವನ್ ಹೇಳಿಕೆ ನೀಡಿದ್ದರೆನ್ನಲಾಗಿದೆ.ಆ ಹೇಳಿಕೆಯನ್ನು ಖಂಡಿಸಿ ಬಜರಂಗದಳದಿಂದ ಐವನ್ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಮುತ್ತಿಗೆ ಯತ್ನವನ್ನು ಮಂಗಳೂರು ದಕ್ಷಿಣ ಪೊಲೀಸರು (ಪಾಂಡೇಶ್ವರ) ವಿಫಲಗೊಳಿಸಿದರು. ಮುತ್ತಿಗೆಗೆ ಯತ್ನಿಸಿದ ಬಜರಂಗದಳದ ಎಂಟು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯ ಐವನ್ ಡಿಸೋಜ ಹಾವೇರಿ ಜಿಲ್ಲೆಯ ಹಾನಗಲ್ ಉಪ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಹಾಗಾಗಿ ದಾಳಿ‌ ವೇಳೆ ಅವರು ಮನೆಯಲ್ಲಿ ಇರಲಿಲ್ಲ.

- Advertisement -
spot_img

Latest News

error: Content is protected !!