- Advertisement -
- Advertisement -
ಬೆಳ್ತಂಗಡಿ: ಆತ್ಮಿ.ಎಸ್.ಶೆಟ್ಟಿ ಈಕೆ ಬೆಳ್ತಂಗಡಿ ವಾಣಿ ಇಂಗ್ಲೀಷ್ ಮೀಡಿಯಂ ಶಾಲೆಯ ವಿದ್ಯಾರ್ಥಿನಿ. ಈಕೆ ಶಾಲೆಗೆ ಹೋಗುವ ಸಂದರ್ಭದಲ್ಲಿ ಪಡಂಗಡಿ ರಸ್ತೆಯಲ್ಲಿ ಮೊಬೈಲ್ ಫೋನ್ ಬಿದ್ದಿರುವುದನ್ನು ಕಂಡಳು.
ಕೂಡಲೇ ಮೊಬೈಲ್ ಹಿಡಿದುಕೊಂಡು ತಕ್ಷಣ ದಾರಿಯಲ್ಲಿ ಹೋಗುತ್ತಿರವರನ್ನು ನಿಲ್ಲಿಸಿ ತನ್ನ ತಂದೆಯನ್ನು ಸಂಪರ್ಕಿಸಿ ಸ್ಥಳಕ್ಕೆ ಬರಲು ತಿಳಿಸಿ ಮೊಬೈಲ್ ಕಳೆದುಕೊಂಡಿದ್ದ ವಾರಸುದಾರಾದ ಸತೀಶ್ ಕುಡ್ವ ಅವರನ್ನು ಸಂಪರ್ಕಿಸಿ ಮೊಬೈಲ್ ಹಸ್ತಾಂತರಿಸುವ ಮೂಲಕ ಪ್ರಾಮಾಣಿಕತೆಯನ್ನು ಮೆರೆದಿದ್ದಾಳೆ ಪುಟ್ಟ ಬಾಲಕಿ. ಈ ಪುಟ್ಟ ಬಾಲಕಿಯ ನಡೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಆತ್ಮಿ.ಎಸ್.ಶೆಟ್ಟಿ ವೈಭವ ಹಾರ್ಡ್ವೇರ್ ಸಂತೋಷ್ ಜಯ ಶೆಟ್ಟಿ ಅಲ್ಲಂದೋಡಿ ಪಡಂಗಡಿ ಇವರ ಮಗಳು.
- Advertisement -