- Advertisement -
- Advertisement -
ಮೂಲ್ಕಿ: ಸಿಗರೇಟು ವಿಚಾರವಾಗಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರೋದು ಇದೀಗ ಬೆಳಕಿಗೆ ಬಂದಿದೆ..
ಸುಶಾಂತ್ ಎಂಬಾತನೇ ಹಲ್ಲೆಗೊಳಗಾದ ಯುವಕ. ಮಾ.5 ರಂದು ರಾತ್ರಿ ಸುಶಾಂತ್ ಮತ್ತು ಜೀವನ್ ಸುವರ್ಣ ಎಂಬಿಬ್ಬರ ನಡುವೆ ಗಲಾಟೆ ನಡೆದಿದೆ. ಆಗ ಜೀವನ್ ಸುಶಾಂತ್ ಎದೆಗೆ ಹರಿತ ಆಯುಧ ಚುಚ್ಚಿದ್ದಾನೆ. ಗಾಯಗೊಂಡ ಸುಶಾಂತ್ನನ್ನು ಆತನ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಸಂಬಂಧ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -