Thursday, April 25, 2024
Homeತಾಜಾ ಸುದ್ದಿಅಸ್ಸಾಂ ಪ್ರವಾಹ ನೈಸರ್ಗಿಕವಲ್ಲ, ಮಾನವ ನಿರ್ಮಿತ..! ತನಿಖೆಗಳಿಂದ ಮೇಲ್ನೋಟಕ್ಕೆ ಸಾಬೀತು: ಇದು 'ಜಿಹಾದಿ' ಕೃತ್ಯ..?

ಅಸ್ಸಾಂ ಪ್ರವಾಹ ನೈಸರ್ಗಿಕವಲ್ಲ, ಮಾನವ ನಿರ್ಮಿತ..! ತನಿಖೆಗಳಿಂದ ಮೇಲ್ನೋಟಕ್ಕೆ ಸಾಬೀತು: ಇದು ‘ಜಿಹಾದಿ’ ಕೃತ್ಯ..?

spot_img
- Advertisement -
- Advertisement -

ಅಸ್ಸಾಂನಲ್ಲಿ ಲಕ್ಷಾಂತರ ಜನರ ಜೀವನವನ್ನು ನರಕವನ್ನಾಗಿಸಿದ ಪ್ರವಾಹ ಮಾನವ ನಿರ್ಮಿತ..! ಅಷ್ಟೇ ಅಲ್ಲ ಇದೊಂದು ಜಿಹಾದಿ ಕೃತ್ಯ ಇರಬಹುದು ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.

ಇದು ಪ್ರಾಕೃತಿಕ ವಿಕೋಪ ಅಲ್ಲವೇ ಅಲ್ಲ ಎಂದು ತನಿಖೆಗಳಿಂದ ಮೇಲ್ನೋಟಕ್ಕೆ ಸಾಬೀತಾಗಿದೆ. ಮಿಥು ಹುಸೇನ್ ಲಷ್ಕರ್ ಹಾಗೂ ಕಾಬೂಲ್ ಖಾನ್ ಎಂಬ ಇಬ್ಬರು ದುಷ್ಕರ್ಮಿಗಳಿಂದ ಅಸ್ಸಾಂನ ಕಚ್ಚಾರ್ ಹಾಗೂ ಸಿಲ್ಚಾರ್ ಜಿಲ್ಲೆಗಳಲ್ಲಿ ಭಾರೀ ಪ್ರವಾಹ ಉಂಟಾಯ್ತು ಎಂದು ತಿಳಿದು ಬಂದಿದೆ. ಈ ಇಬ್ಬರೂ ಆರೋಪಿಗಳು ಇನ್ನಿತರ ಸಹಚರರ ಜೊತೆಗೂಡಿ ಬರಾಕ್ ನದಿಯ ತಡೆಗೋಡೆಯನ್ನು ಧ್ವಂಸಗೊಳಿಸಿದ ಕಾರಣ ಪ್ರವಾಹ ಉಂಟಾಗಿದೆ ಎಂದು ತಿಳಿದು ಬಂದಿದೆ.

ಅಸ್ಸಾಂನಲ್ಲಿ ಮಾದಕ ವಸ್ತುಗಳ ಸಾಗಾಟ, ಬಾಂಗ್ಲಾ ವಲಸಿಗರ ಕಾಟ ಹಾಗೂ ಲ್ಯಾಂಡ್ ಜಿಹಾದ್‌ನ ಆರ್ಭಟ ಮಿತಿ ಮೀರಿರುವ ಬೆನ್ನಲ್ಲೇ ಇದೀಗ ಭೀಕರ ಪ್ರವಾಹಕ್ಕೂ ಜಿಹಾದಿಗಳು ಕಾರಣವಾಗಿರುವ ಶಂಕೆ ಜನತೆಯಲ್ಲಿ ಭೀತಿ ಮೂಡಿಸಿದೆ..!

ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾಸ್ ಕೂಡಾ ಈ ವಿಚಾರವನ್ನು ದೃಢಪಡಿಸಿದ್ದು, ಪ್ರವಾಹವು ಪ್ರಾಕೃತಿಕ ವಿಕೋಪವಲ್ಲ, ಇದು ಮಾನವ ನಿರ್ಮಿತ ಅನ್ನೋದನ್ನು ಖಚಿತಪಡಿಸಿದ್ದಾರೆ. ಅಷ್ಟೇ ಅಲ್ಲ, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಬರಾಕ್ ನದಿ ಹರಿಯುವ ಕಚ್ಚಾರ್ ಜಿಲ್ಲೆಯಲ್ಲಿ ತಡೆಗೋಡೆ ಇರುವ ಪ್ರದೇಶಕ್ಕೆ ತನ್ನ ಸಂಗಡಿಗರ ಜೊತೆ ಬಂದಿದ್ದ ಆರೋಪಿ ಖಾನ್, ನದಿ ಏರಿಯನ್ನು ಧ್ವಂಸಗೊಳಿಸುವ ಚಿತ್ರೀಕರಣ ಕೂಡಾ ಮಾಡಿದ್ದ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಸಿಎಂ ಭೇಟಿ ನೀಡಿದಾಗ ಸ್ಥಳೀಯರು ಧ್ವಂಸವಾದ ಏರಿ ಹಾಗೂ ಈ ದೃಶ್ಯಾವಳಿಯನ್ನು ಸಿಎಂಗೆ ತೋರಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಪ್ರಕರಣ ಸಂಬಂಧ ತನಿಖೆ ನಡೆಸಲು ಸಿಐಡಿಗೆ ಸರ್ಕಾರ ಸೂಚಿಸಿದೆ. ತನಿಖಾ ತಂಡವು ಈ ಕೃತ್ಯದಲ್ಲಿ 6 ಮಂದಿ ಭಾಗಿಯಾಗಿರುವ ಶಂಕೆ ವ್ಯಕ್ತಪಡಿಸಿದೆ. ಹಾಗೆ ನೋಡಿದ್ರೆ, ದುಷ್ಕರ್ಮಿಗಳು ನದಿಯ ತಡೆ ಗೋಡೆಯನ್ನು ಧ್ವಂಸಗೊಳಿಸಿದ ಸಂಬಂಧ ಮೇ 24 ರಂದೇ ಪೊಲೀಸರಿಗೆ ದೂರು ನೀಡಲಾಗಿತ್ತು. ಆ ನಂತರದ ದಿನಗಳಲ್ಲಿ ಭಾರೀ ಮಳೆ ಬಂದ ಕಾರಣ ಬರಾಕ್ ನದಿಯ ನೀರು ಧ್ವಂಸಗೊಂಡಿದ್ದ ತಡೆಗೋಡೆಯಿಂದ ಜನ ವಸತಿ ಪ್ರದೇಶಗಳತ್ತ ಮುನ್ನುಗ್ಗಿತ್ತು. ಈ ಪ್ರವಾಹ ಪರಿಸ್ಥಿತಿಯಿಂದಾಗಿ 1 ಲಕ್ಷಕ್ಕೂ ಹೆಚ್ಚು ಮಂದಿ ತೊಂದರೆಗೆ ಒಳಗಾದರು.

ಹಾಗೆ ನೋಡಿದರೆ, ಸಿಲ್ಚಾರ್ ಜಿಲ್ಲೆಯಲ್ಲಿ ಹಿಂದೂಗಳೇ ಬಹುಸಂಖ್ಯಾತರು. ಹೀಗಾಗಿ, ಈ ಕೃತ್ಯವು ಹಿಂದೂಗಳಿಗೆ ಅಪಾಯ ತಂದೊಡ್ಡಲು ಮಾಡಿದ ಸಂಚೇ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ. ಸಿಲ್ಚಾರ್ ಜಿಲ್ಲೆಯಲ್ಲಿ ಶೇ. 86ಕ್ಕೂ ಹೆಚ್ಚು ಹಿಂದೂ ಜನಸಂಖ್ಯೆ ಇದೆ. ಬಾಂಗ್ಲಾ ದೇಶದಿಂದ ಒಳನುಸುಳುವ ಜನರು ಅಸ್ಸಾಂನಲ್ಲಿ ಮಾದಕ ದ್ರವ್ಯ ಸಾಗಾಟ ಇನ್ನಿತರ ಅಪರಾಧ ಕೃತ್ಯ ಎಸಗಿ ಹಣ ಸಂಪಾದಿಸಿ ಬಡ ಹಿಂದೂಗಳ ಭೂಮಿಯನ್ನು ಕಡಿಮೆ ಬೆಲೆಗೆ ಖರೀದಿಸುತ್ತಾರೆ. ಈ ಮೂಲಕ ಲ್ಯಾಂಡ್ ಜಿಹಾದ್ ನಡೆಸುತ್ತಿದ್ದಾರೆ ಎಂಬ ಆರೋಪ ಬಹಳ ದಿನಗಳಿಂದ ಇದೆ. ಇದೀಗ ಸೃಷ್ಟಿಯಾಗಿರುವ ಪ್ರವಾಹವು ಭೂ ಜಿಹಾದ್‌ನ ಭಾಗ ಇರಬಹುದೇ ಎಂಬ ಅನುಮಾನವೂ ವ್ಯಕ್ತವಾಗಿದೆ.

- Advertisement -
spot_img

Latest News

error: Content is protected !!