Tuesday, May 14, 2024
Homeಕರಾವಳಿಉಡುಪಿಮಣಿಪಾಲ: ಇಂದ್ರಾಳಿ ರೈಲು ನಿಲ್ದಾಣದಲ್ಲಿ ಕಳ್ಳತನ ಪ್ರಕರಣ: ಕೃತ್ಯ ನಡೆದ ಎಂಟು ಗಂಟೆಯೊಳಗೆ ಇಬ್ಬರು ಕಳ್ಳಿಯರ...

ಮಣಿಪಾಲ: ಇಂದ್ರಾಳಿ ರೈಲು ನಿಲ್ದಾಣದಲ್ಲಿ ಕಳ್ಳತನ ಪ್ರಕರಣ: ಕೃತ್ಯ ನಡೆದ ಎಂಟು ಗಂಟೆಯೊಳಗೆ ಇಬ್ಬರು ಕಳ್ಳಿಯರ ಬಂಧನ

spot_img
- Advertisement -
- Advertisement -

ಮಣಿಪಾಲ: ಇಂದ್ರಾಳಿ ರೈಲು ನಿಲ್ದಾಣದಲ್ಲಿ ರೈಲು ಹತ್ತುವ ಸಮಯದಲ್ಲಿ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಚಿನ್ನಾಭರಣ ಕಳ್ಳತನ ಮಾಡಿದ ಪ್ರಕರಣ ಸಂಬಂಧ ಇಬ್ಬರು ಕಳ್ಳಿಯರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಲಲಿತಾ ಭೋವಿ ಮತ್ತು ಸುಶೀಲಮ್ಮ ಭೋವಿ ಬಂಧಿತರು. ಕೃತ್ಯ ನಡೆದ ಎಂಟು ಗಂಟೆಗಳ ಒಳಗೆ ಚಿನ್ನಾಭರಣ ಸಹಿತ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಿನ್ನೆ(ಮಾ.14) ಪುನೀತ ವಸಂತ್ ಹೆಗ್ಡೆ ಕುಟುಂಬದೊಂದಿಗೆ ಮುಂಬೈಗೆ ಹೋಗಲು ಇಂದ್ರಾಳಿ ರೈಲ್ವೆ ಸ್ಟೇಷನ್‌ನಲ್ಲಿ ಮಂಗಳೂರು – ಮುಂಬಯಿ ಎಕ್ಸ್ ಪ್ರೆಸ್ ರೈಲು ಏರಿದ್ರು. ಇವರು ಬ್ಯಾಗ್‌ನಲ್ಲಿ ಚಿನ್ನಾಭರಣ ಇಟ್ಟಿದ್ರು. ರೈಲು ಹೊರಟ ಸಂದರ್ಭ ಸೀಟ್‌ನಲ್ಲಿ ಕುಳಿತು ಬ್ಯಾಗ್‌ ನೋಡಿದ್ರೆ ಚಿನ್ನಾಭರಣ ಕಳುವಾಗಿತ್ತು. ಈ ಸಂಬಂಧ ದೂರು ದಾಖಲಿಸಿದ್ರು.

- Advertisement -
spot_img

Latest News

error: Content is protected !!