Sunday, May 5, 2024
Homeಕರಾವಳಿಕಡಬ: ಅಡಿಕೆ ಕದ್ದು ಮನೆಯಲ್ಲಿ ಸಂಗ್ರಹಿಸಿಟ್ಟ ಕಳ್ಳ; ಕೇಳಲು ಹೋದವರಿಗೆ ತಲವಾರ್ ಝಳಪಿಸಿ ಬೆದರಿಕೆ

ಕಡಬ: ಅಡಿಕೆ ಕದ್ದು ಮನೆಯಲ್ಲಿ ಸಂಗ್ರಹಿಸಿಟ್ಟ ಕಳ್ಳ; ಕೇಳಲು ಹೋದವರಿಗೆ ತಲವಾರ್ ಝಳಪಿಸಿ ಬೆದರಿಕೆ

spot_img
- Advertisement -
- Advertisement -

ಕಡಬ: ಮನೆಯೊಂದರಿಂದ  ಅಡಿಕೆ ಕದ್ದು ಮನೆಯಲ್ಲಿ ಸಂಗ್ರಹಿಸಿಟ್ಟದ್ದ ಅಲ್ಲದೇ ಕೇಳಲು ಹೋದವರಿಗೆ ತಲವಾರ್ ಝಳಪಿಸಿ ಬೆದರಿಕೆ ಹಾಕಿದ ಘಟನೆ ಕಡಬ ತಾಲೂಕಿನ ಕೊಯಿಲ ಗ್ರಾಮದ ಆತೂರಿನಲ್ಲಿ ನಡೆದಿದೆ. ಕೊಯಿಲ ಗ್ರಾಮದ ಎಲ್ಯಂಗ ನಿವಾಸಿ, ವಿದೇಶದಲ್ಲಿ ಉದ್ಯೋಗದಲ್ಲಿರುವ ಅಬೂಬಕ್ಕರ್ ಸಿದ್ದೀಕ್ ಎಂಬವರ ಮನೆಯಿಂದ ಒಣಗಲು ಹಾಕಿದ್ದ ಹಣ್ಣಡಿಕೆ ಹಾಗೂ ಗೋಣಿ ಚೀಲದಲ್ಲಿ ತುಂಬಿಸಿಟ್ಟಿದ್ದ ಒಣ ಅಡಿಕೆ ನ.6ರಂದು ರಾತ್ರಿ ಕಳ್ಳತನ ಆಗಿತ್ತು.ಅಡಿಕೆ ಕಳ್ಳತನ ಆಗಿರುವುದು ನ.7ರ ಬೆಳಿಗ್ಗೆ ಅಬೂಬಕ್ಕರ್ ಸಿದ್ದೀಕ್ ಅವರ ಪತ್ನಿಯ ಗಮನಕ್ಕೆ ಬಂದಿದೆ. ಅವರು ಅನುಮಾನದ ಮೇರೆಗೆ ಈ ಹಿಂದಿನ ಕಳ್ಳತನ ಹಾಗೂ ಇತರೇ ಪ್ರಕರಣಗಳ ಆರೋಪಿಯಾಗಿರುವ ಆತೂರು ನಿವಾಸಿಯ  ಮನೆಗೆ ನೀರು ಕುಡಿಯುವ ನೆಪದಲ್ಲಿ ಬಂದು ಪರಿಶೀಲನೆ ನಡೆಸಿದ್ದು ಈ ವೇಳೆ ಮನೆಯ ಕೋಣೆಯೊಂದರಲ್ಲಿ ಅಡಿಕೆ ಚೀಲ ಇರುವುದು ಕಂಡು ಬಂದಿದೆ.ಈ ಬಗ್ಗೆ ಆರೋಪಿ ಮತ್ತು ಆತನ ಮನೆಯವರ ಬಳಿ ವಿಚಾರಿಸಿದಾಗ   ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಅಶ್ರಫ್  ಎಂಬಾತ ತಲವಾರು ಝಳಪಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆಯೊಡ್ಡಿದ್ದಾರೆ ಎನ್ನಲಾಗಿದೆ.ಘಟನೆ ಕುರಿತು ಮಾಹಿತಿ ಪಡೆದುಕೊಂಡ ಕಡಬ ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದಾನೆ. ಪೊಲೀಸರು ಬೆನ್ನಟ್ಟಿ ಹಿಡಿಯಲು ಪ್ರಯತ್ನಿಸಿದ್ದರೂ ಆರೋಪಿ ತಪ್ಪಿಸಿಕೊಂಡಿದ್ದಾನೆ. ಸಂಜೆ ತನಕವೂ ಪೊಲೀಸರು ಹುಡುಕಾಟ ನಡೆಸಿದರೂ ಆರೋಪಿ ಸುಳಿವು ಸಿಕ್ಕಿಲ್ಲ. ಬಳಿಕ ಪೊಲೀಸರು ಆತನ ಮನೆಯಲ್ಲಿದ್ದ ಅಡಿಕೆ, ಆತನ ಬೈಕ್ ಹಾಗೂ ತಲವಾರು ವಶಕ್ಕೆ ಪಡೆದು ಕೊಂಡಿದ್ದಾರೆ ಎಂದು  ತಿಳಿದು ಬಂದಿದೆ.

 

- Advertisement -
spot_img

Latest News

error: Content is protected !!