Saturday, March 15, 2025
Homeತಾಜಾ ಸುದ್ದಿಹಲ್ಲೆ ಪ್ರಕರಣ: ಸೋನಿಯಾ ಗಾಂಧಿಯೇ ನೇರ ಕಾರಣ ಎಂದ ಅರ್ನಾಬ್ ಗೋಸ್ವಾಮಿ

ಹಲ್ಲೆ ಪ್ರಕರಣ: ಸೋನಿಯಾ ಗಾಂಧಿಯೇ ನೇರ ಕಾರಣ ಎಂದ ಅರ್ನಾಬ್ ಗೋಸ್ವಾಮಿ

spot_img
- Advertisement -
- Advertisement -

ಮುಂಬೈ: ಇಂದು ಬೆಳಗಿನ ಜಾವ ಸ್ಟುಡಿಯೋ ಕೆಲಸ ಮುಗಿಸಿ ಮನೆಗೆ ಕಾರಿನಲ್ಲಿ ಹೊರಟಿದ್ದ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಮತ್ತು ಅವರ ಪತ್ನಿ ಸಮಿಯಾ ಗೋಸ್ವಾಮಿ ಮೇಲೆ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ದಾಳಿ ನಡೆಸಿದ ಘಟನೆ ದೇಶದ ಆರ್ಥಿಕ ರಾಜಧಾನಿ ಮುಂಬೈಯಲ್ಲಿ ನಡೆದಿದೆ.
ದಾಳಿಯಲ್ಲಿ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ
ಎನ್ ಎಂ ಜೋಶಿ ಮಾರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಘಟನೆ ಸಂಬಂಧ ಸಂಶಯದ ಮೇಲೆ ಇಬ್ಬರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ .
ಮಹಾರಾಷ್ಟ್ರದ ಫಾಲ್ಘರ್ ಸಾಧುಗಳ ಗುಂಪು ಹತ್ಯೆಗೆ ಸಂಭಂದಿಸಿದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಮಾಡಿದ್ದ ಆರೋಪದ ಮೇಲೆ ನಿನ್ನೆ ಅರ್ನಾಬ್ ಗೋಸ್ವಾಮಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ನನ್ನ ಮೇಲಿನ ದಾಳಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರೇ ನೇರ ಹೊಣೆ ಎಂದು ಅರ್ನಾಬ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

- Advertisement -
spot_img

Latest News

error: Content is protected !!