Sunday, April 28, 2024
Homeಕರಾವಳಿಕುವೆಟ್ಟು ಗ್ರಾಮ ಪಂಚಾಯತ್ ಗೆ 'ಆಪ್ತರಕ್ಷಕ' ವಾಹನ ಹಸ್ತಾಂತರ

ಕುವೆಟ್ಟು ಗ್ರಾಮ ಪಂಚಾಯತ್ ಗೆ ‘ಆಪ್ತರಕ್ಷಕ’ ವಾಹನ ಹಸ್ತಾಂತರ

spot_img
- Advertisement -
- Advertisement -

ಬೆಳ್ತಂಗಡಿ: ಉಜಿರೆ ‘ಬದುಕು ಕಟ್ಟೋಣ ಬನ್ನಿ ತಂಡ ‘ ಮತ್ತು ‘ಬೆಳ್ತಂಗಡಿ ರೋಟರಿ ಕ್ಲಬ್ ‘ಸಹಯೋಗದಲ್ಲಿ ಇಂದು ಕುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಂದು “ಆಪ್ತರಕ್ಷಕ” ವಾಹನ ಗ್ರಾ.ಪಂ ಉಪಾಧ್ಯಕ್ಷರಾದ ಪ್ರದೀಪ್ ಶೆಟ್ಟಿ ಮತ್ತು ಪಿಡಿಓ ಶ್ರೀನಿವಾಸ್ ಡಿ.ಪಿ ಯವರಿಗೆ ಕೀ ನೀಡುವ ಮೂಲಕ ಹಸ್ತಾಂತರಿಸಲಾಯಿತು. ಕುವೆಟ್ಟು ಗ್ರಾ.ಪಂ ವ್ಯಾಪ್ತಿಯ 9 ಜನ ಆಶಾ ಕಾರ್ಯಕರ್ತೆಯರು ಮತ್ತು 2 ಜನ ನರ್ಸ್ ಗಳಿಗೆ ಗೌರವಿಸಿ ಕಿಟ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾ.ಪಂ ಉಪಾಧ್ಯಕ್ಷ ಪ್ರದೀಶ್ ಶೆಟ್ಟಿ , ಪಿಡಿಓ ಶ್ರೀನಿವಾಸ್ ಡಿ.ಪಿ , ಕಾರ್ಯದರ್ಶಿ ಸೇವಂತಿ , ನಿಯೋಜಿತ ರೋಟರಿ ಕ್ಲಬ್ ಅಧ್ಯಕ್ಷ ಶರತ್ ಕೃಷ್ಣ ಪಡ್ವೇಟ್ನಾಯ, ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರಾದ ಲಕ್ಷ್ಮೀ ಗ್ರೂಪ್ಸ್ ಮಾಲಕ ಮೋಹನ್ ಕುಮಾರ್ ಮತ್ತು ಸಂಧ್ಯಾ ಟ್ರೇಡರ್ಸ್ ಮಾಲಕ ರಾಜೇಶ್ ಪೈ , ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರು ಶಶಿಧರ್ ಕಲ್ಮಂಜ ,ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಶ್ರೀಧರ್.ಕೆ.ವಿ ,ಅಬೂಬಕ್ಕರ್ ರೋಟರಿ ಕ್ಲಬ್ ಮತ್ತಿತರರು ಭಾಗವಹಿಸಿದರು.

- Advertisement -
spot_img

Latest News

error: Content is protected !!