Tuesday, May 7, 2024
Homeಉತ್ತರ ಕನ್ನಡಈ ಜಗತ್ತಿಗೆ ಅಂಟಿದ ಅತೀ ದೊಡ್ಡ ಶಾಪ ಇಸ್ಲಾಂ! ಸಂಸದ ಅನಂತ ಕುಮಾರ್ ಹೆಗಡೆಯವರಿಂದ ಮತ್ತೊಮ್ಮೆ...

ಈ ಜಗತ್ತಿಗೆ ಅಂಟಿದ ಅತೀ ದೊಡ್ಡ ಶಾಪ ಇಸ್ಲಾಂ! ಸಂಸದ ಅನಂತ ಕುಮಾರ್ ಹೆಗಡೆಯವರಿಂದ ಮತ್ತೊಮ್ಮೆ ವಿವಾದಾತ್ಮಕ ಬರಹ

spot_img
- Advertisement -
- Advertisement -

ಉತ್ತರಕನ್ನಡ: ಮುಸಲ್ಮಾನರಿಗೆ ವ್ಯಾಪಾರ ಬಹಿಷ್ಕಾರ ಕರಾವಳಿಯಿಂದ ಪ್ರಾರಂಭಗೊಂಡು ರಾಜ್ಯದಾದ್ಯಂತ ಹಬ್ಬತೊಡಗಿತ್ತು. ಇದರಿಂದ ಬಹಿಷ್ಕಾರ ತೆರವಿಗೆ ಸಹಕರಿಸುವಂತೆ  ಮುಸ್ಲಿಂ ಧಾರ್ಮಿಕ ಮುಖಂಡರೊಂದಿಗೆ ಉಡುಪಿಯ ಪೇಜಾವರ ಶ್ರೀಗಳ ಬಳಿ ನಿಯೋಗದೊಂದಿಗೆ ತೆರಳಿದ್ದರು. ಆದರೆ, ಪೇಜಾವರ ಶ್ರೀಗಳು ಮಾತ್ರ ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳದೇ ನಿಯೋಗ ವಾಪಾಸ್ ಕಳುಹಿಸಿದ್ದರು. ಈ ವಿಚಾರದ ಬಗ್ಗೆ ಉತ್ತರಕನ್ನಡ ಜಿಲ್ಲಾ ಸಂಸದ ಅನಂತ ಕುಮಾರ್ ಹೆಗಡೆ ಅವರು ತನ್ನ ಫೇಸ್‌ಬುಕ್ ಖಾತೆಯಲ್ಲಿ ಬರೆಯುವ ಮೂಲಕ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಇಸ್ಲಾಂನ ಅತ್ಯಂತ ಅಸಹಿಷ್ಣುತೆ, ಮತೀಯತೆ ಖಂಡಿಸಿ ಮುಸ್ಲಿಮರ ನಿಯೋಗವನ್ನು ವಾಪಸ್‌ ಕಳುಹಿಸಿದ ಪರಮಪೂಜ್ಯ ಪೇಜಾವರ ಶ್ರೀಗಳಲ್ಲಿ ನನ್ನ ಶಿರಸಾಷ್ಟಾಂಗ ಪ್ರಣಾಮಗಳು ಹಾಗೂ ಧನ್ಯವಾದಗಳು. ಈ ಜಗತ್ತಿಗೆ ಅಂಟಿದ ಅತೀ ದೊಡ್ಡ ಶಾಪ ಇಸ್ಲಾಂ! ಮನುಷ್ಯನ ಊಹೆಗೂ ನಿಲುಕದ ಬರ್ಬರತೆ, ಹಿಂಸೆ, ಕ್ರೌರ್ಯ, ಭಯೋತ್ಪಾದನೆಯೇ ಅವರ ಘನ ಇತಿಹಾಸ. ಇಂದಿನ ವಿಶ್ವದ ಶಾಂತಿಗೆ ಅಪಾಯ, ಶಿಕ್ಷಣದ ಕೊರತೆಯಲ್ಲ, ನಿರುದ್ಯೋಗವೂ ಅಲ್ಲ, ಬಡತನವಂತೂ ಅಲ್ಲವೇ ಅಲ್ಲ. ಇಡೀ ಜಗತ್ತಿನ ಅಪಾಯ, ಇಸ್ಲಾಂನ ಪೈಶಾಚಿಕತೆ!  ಆದರೆ ಎಡಬಿಡಂಗಿಗಳಿಗೆ ಮಾತ್ರ ಹಾಗೆನಿಸುವುದೇ ಇಲ್ಲ. ಅದನ್ನು ಅವರ ನಿರ್ವೀರ್ಯತೆ ಅಂತ ಕರೆಯಬೇಕೊ? ಹೇಡಿತನ ಅಂತ ಕರೆಯಬೇಕೊ? ಅಥವಾ ಅವರಿಗೆ ಬಡಿದ ಮಹಾ ಮೂರ್ಖತನದ ರೋಗ ಅಂತ ಹೇಳಬೇಕೊ? ಗೊತ್ತಿಲ್ಲ.

ಸಂಸ್ಕೃತಿಯ ಅರಿವೇ ಇಲ್ಲದ ಸೋಗಲಾಡಿ ಶಿಕ್ಷಣದ ಪರಿಣಾಮವೋ ಏನೋ ಗೊತ್ತಿಲ್ಲ, ಅವರು ಯಾರೂ ಸಹ ಇಸ್ಲಾಂನ ಹೇಯ ಕೃತ್ಯಗಳನ್ನ ಖಂಡಿಸುವುದು ಹಾಗಿರಲಿ, ಅದರ ಬಗ್ಗೆ ಚಕಾರವನ್ನೂ ಎತ್ತುವುದಿಲ್ಲ ಅಂಥವರೂ ಯಾರೇ ಇರಲಿ ಅವರಿಗೆ ನನ್ನ ಧಿಕ್ಕಾರವಿರಲಿ!!!. ಇವುಗಳ ಮಧ್ಯದಲ್ಲಿ ಅದೇನೋ ಒಂದು ಆತ್ಮಾಭಿಮಾನದ ಕೋಲ್ಮಿಂಚು ಶ್ರೀ ಪೇಜಾವರ ಶ್ರೀಗಳ ನುಡಿ ಹಾಗೂ ನಡೆ. ಅದಕ್ಕಾಗಿಯೇ ಪರಮಪೂಜ್ಯರು ನಮಗೆ ಆದರ್ಶರಾಗಿ ನಿಲ್ಲುತ್ತಾರೆ. ಹಿಂದೂ ಸಮಾಜದ ಧ್ವನಿಯಾಗಿ ನಿಂತು, ಇಸ್ಲಾಂನ ಹುಚ್ಚಾಟಗಳನ್ನು ಬಹಿರಂಗವಾಗಿ ಖಂಡಿಸಿದ್ದಾರೆ ಯಾವ ಮುಲಾಜೂ ಇಲ್ಲದೆ ಸತ್ಯವನ್ನು ಚಾಟಿಯಿಂದ ಹೊಡೆದ ಹಾಗೆ ಹೇಳಿದ್ದಾರೆ.

ಇತ್ತೀಚೆಗೆ ಪೇಜಾವರ ಶ್ರೀಗಳನ್ನು ಭೇಟಿ ಮಾಡಲು ಹೋಗಿದ್ದ ಮುಸ್ಲಿಂ ನಿಯೋಗದ ಸದಸ್ಯರು ಹಿಂದೂ- ಮುಸ್ಲಿಂ ಸಮುದಾಯದ ನಡುವೆ ಉಂಟಾಗಿರುವ ಕಂದಕದ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿಕೊಂಡಾಗ ಶ್ರೀಗಳು ಮುಸ್ಲಿಂ ನಿಯೋಗದ ಸದಸ್ಯರಿಗೆ ಚಾಟಿ ಏಟು ನೀಡಿದ್ದಾರೆ. ಮುಸ್ಲಿಂ ಸಮುದಾಯ, ಹಿಂದೆ ಅವರಿಂದಾದ ಆ ಎಲ್ಲಾ ಹಿಂಸಾಚಾರ, ದೇವಾಲಯಗಳ ಲೂಟಿ, ಹಿಂದೂ ಹೆಂಗಸರ, ಮಕ್ಕಳ ಮೇಲೆ ಎಸಗಿದ ದೌರ್ಜನ್ಯಗಳ ಆತ್ಮಾವಲೋಕನ, ಪರಾಮರ್ಶೆ ಆಗಬೇಕು ಎಂದು ಹೇಳಿದ್ದಾರೆ. ಈಗ ಉಂಟಾದ ಸಮಸ್ಯೆ ನೂರಾರು ವರ್ಷಗಳ ದೌರ್ಜನ್ಯದ ಪ್ರತಿಫಲ, ಇದಕ್ಕೆ ಮೂಲ ಕಾರಣ ಯಾರು? ಎಂದು ಶ್ರೀಗಳು ಮುಸ್ಲಿಮರಿಗೆ ಪ್ರಶ್ನೆ ಮಾಡಿದ್ದಾರೆ.

ಶ್ರೀಗಳ ಈ ದಿಟ್ಟ ನಡೆಯೇ ಹಿಂದೂ ಹೃದಯಗಳಿಗೆ ಮತ್ತಷ್ಟು ಮನೋಬಲವನ್ನು ನೀಡಿದೆ, ಶ್ರೀಗಳ ಬಗ್ಗೆ ಇರುವ ಗೌರವ ನೂರ್ಮಡಿಯಾಗಿದೆ. ಹಿರಿಯ ಶ್ರೀಗಳು ಕೊಟ್ಟ “ಮಮದೀಕ್ಷಾ ಹಿಂದುರಕ್ಷಾ” ಕರೆ ಮತ್ತೊಮ್ಮೆ ಮಾರ್ದನಿಗೊಂಡಿದೆ. ಸಂನ್ಯಾಸದ ನಿಜವಾದ ಅಂತರ್ಧ್ವನಿಗೆ ಮತ್ತೊಮ್ಮೆ ನನ್ನ ಪ್ರಣಾಮಗಳನ್ನು ಸಲ್ಲಿಸುತ್ತೇನೆ. ಕೃಷ್ಣಭೂಮಿಯಲ್ಲಿ ಮೊಳಗಿದ ಪಾಂಚಚನ್ಯ ನಾಡಿನೆಲ್ಲೆಡೆ ಪ್ರತಿಧ್ವನಿಗೊಳ್ಳಲಿ ಎಂದು ಆಶಿಸುತ್ತೇನೆ. ವೀರಶ್ರೀಗಳ ಪಾದಗಳಲ್ಲಿ ನನ್ನ ಭೈರವ ನಮನಗಳು ಎಂದು ಸಂಸದ ಅನಂತ ಕುಮಾರ್ ಹೆಗಡೆ ತನ್ನ ಫೇಸ್‌ಬುಕ್ ಖಾತೆಯಲ್ಲಿ ಬರೆದು ಕೊಂಡಿದ್ದಾರೆ. ಸಂಸದ ಹೆಗಡೆಯವರ ಈ ಪ್ರತಿಕ್ರಿಯೆಯ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ.

- Advertisement -
spot_img

Latest News

error: Content is protected !!