Friday, May 17, 2024
HomeWorld'ಅಗ್ನಿಪಥ್' ವೀರರಿಗೆ ಬಹುದೊಡ್ಡ ಆಫರ್ ಘೋಷಿಸಿದ ಆನಂದ್ ಮಹೀಂದ್ರಾ

‘ಅಗ್ನಿಪಥ್’ ವೀರರಿಗೆ ಬಹುದೊಡ್ಡ ಆಫರ್ ಘೋಷಿಸಿದ ಆನಂದ್ ಮಹೀಂದ್ರಾ

spot_img
- Advertisement -
- Advertisement -

ನವದೆಹಲಿ: ‘ಅಗ್ನಿಪಥ್’ ಯೋಜನೆಯ ‘ಅಗ್ನಿವೀರ್’ ಗಳಾಗಿ ಕೆಲಸ ಮಾಡಿದ ಯುವಕರಿಗೆ ನಮ್ಮ ಕಂಪನಿಯಲ್ಲಿ ಕೆಲಸ ನೀಡುವುದಾಗ ಮಹೀಂದ್ರಾ ಗ್ರೂಪ್ ಮುಖ್ಯಸ್ಥ ಆನಂದ್ ಮಹೀಂದ್ರಾ ಘೋಷಣೆ ಮಾಡಿದ್ದಾರೆ.


ಈ ಕುರಿತು ಟ್ವಿಟ್ ಮಾಡಿರುವ ಅವರು, ಅಗ್ನಿಪಥ್ ಯೋಜನೆ ಘೋಷಣೆಯ ನಂತರ ನಡೆಯುತ್ತಿರುವ ಹಿಂಸಾಚಾರದಿಂದ ನನಗೆ ಬೇಸರವಾಗಿದೆ. ಕಳೆದ ವರ್ಷ ಈ ಯೋಜನೆಯನ್ನು ಪರಿಗಣಿಸಿದಾಗ, ಅಗ್ನಿವೀರರಿಗೆ ಸಿಗುವ ಶಿಸ್ತು ಮತ್ತು ಕೌಶಲ್ಯಗಳು ಅವನನ್ನು ಗಮನಾರ್ಹವಾಗಿ ಉದ್ಯೋಗಿಯನ್ನಾಗಿ ಮಾಡುತ್ತದೆ ಎಂದು ನಾನು ಹೇಳಿದ್ದೆ.


ಮಹೀಂದ್ರಾ ಗ್ರೂಪ್ ಅಂತಹ ತರಬೇತಿ ಪಡೆದ ಸಮರ್ಥ ಯುವಕರಿಗೆ ಉದ್ಯೋಗ ನೇಮಕಾತಿಯಲ್ಲಿ ಆದ್ಯತೆ ನೀಡುತ್ತದೆ” ಎಂದು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!