Friday, May 3, 2024
Homeಕರಾವಳಿಉಡುಪಿಪಡುಬಿದ್ರೆ: ಕಾಂತಾರ ಸಿನಿಮಾ ಶೈಲಿಯಲ್ಲಿಯೇ ನಡೆಯಿತೊಂದು ಘಟನೆ: ಕೋರ್ಟ್‌ ಮೆಟ್ಟಿಲೇರಿದ ಮರುದಿನವೇ ದೂರುದಾರ ಸಾವು

ಪಡುಬಿದ್ರೆ: ಕಾಂತಾರ ಸಿನಿಮಾ ಶೈಲಿಯಲ್ಲಿಯೇ ನಡೆಯಿತೊಂದು ಘಟನೆ: ಕೋರ್ಟ್‌ ಮೆಟ್ಟಿಲೇರಿದ ಮರುದಿನವೇ ದೂರುದಾರ ಸಾವು

spot_img
- Advertisement -
- Advertisement -

ಪಡುಬಿದ್ರೆ: ಪಡುಬಿದ್ರಿಯಲ್ಲಿ ಕಾಂತಾರ ಸಿನಿಮಾ ಶೈಲಿಯ ಘಟನೆಯೊಂದು ನಡೆದಿದೆ. 500 ವರ್ಷ ಇತಿಹಾಸವಿರುವ ಪಡುಹಿತ್ಲು ಜಾರಂದಾಯ ದೈವಸ್ಥಾನದ ನೇಮೋತ್ಸವ ವಿಚಾರದಲ್ಲಿ ಕಲಹ ಉಂಟಾಗಿತ್ತು. ಪ್ರತಿವರ್ಷದಂತೆ ಈ ವರ್ಷವೂ ನೇಮೋತ್ಸವ ನಡೆಸಲು ಜಾರಂದಾಯ ದೈವಸ್ಥಾನ ಸಮಿತಿ ತೀರ್ಮಾನಿಸಿ ,ಜನವರಿ 7 ರಂದು ಕೋಲ ನಡೆಸಲು ತೀರ್ಮಾನಿಸಿತ್ತು. ಇದರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಜಯಪೂಜಾರಿ ಮತ್ತು ಪ್ರಕಾಶ್ ಶೆಟ್ಟಿ‌ ಕೋಲಕ್ಕೆ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗಿದ್ರು.

ಈ ನಡುವೆ ಓರ್ವ ಟ್ರಸ್ಟಿ ಜಯ ಪೂಜಾರಿ ಕೋರ್ಟ್ ಮೆಟ್ಟಿಲೇರಿದ ಮರುದಿನವೇ ಸಾವನ್ನಪ್ಪಿದ್ದಾರೆ. ಇದು ನಮ್ಮ ಜಾರಂದಾಯ ದೈವದ ಶಕ್ತಿ ಕಾರಣಿಕ ಅಂತ ಊರವರು ಹೇಳ್ತಿದ್ದಾರೆ. ಪ್ರಕಾಶ್ ಶೆಟ್ಟಿ ಟ್ರಸ್ಟ್ ರಚನೆಗೆ ಮುಂದಾಳತ್ವ ವಹಿಸಿದವರು ಎಂದು ಗ್ರಾಮಸ್ಥರು ದೂರಿದ್ದಾರೆ. ಈ ನಡುವೆ ಪ್ರಾಣಹಾನಿಯಾದ ಕಾರಣ ವಾರ್ಷಿಕ ನೇಮೋತ್ಸವವನ್ನು ಮುಂದೂಡಲಾಗಿದೆ.

- Advertisement -
spot_img

Latest News

error: Content is protected !!