ಬೆಳ್ತಂಗಡಿ : ಮಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಕಕ್ಕಿಂಜೆಯ ರೋಗಿಯೊಬ್ಬರನ್ನು ಕರೆತರಲು ಹೋಗಿದ್ದು ಮಡಂತ್ಯಾರ್ ತಲುಪುವಾಗ ಬರುವುದು ಬೇಡ ಎಂಬ ಕರೆ ಬಂದಿದ್ದು ಅಲ್ಲಿಂದ ಹಿಂತಿರುಗುತ್ತಿರುವ ವೇಳೆ ಬೆಳ್ತಂಗಡಿ ಸೇತುವೆಯಲ್ಲಿ ಅಪಘಾತ ನಡೆದಿದೆ.
ಆ್ಯಂಬುಲೆನ್ಸ್ ಬೆಳ್ತಂಗಡಿ ಸೇತುವೆ ಬದಿಗೆ ಡಿಕ್ಕಿ ಹೊಡೆದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಜೀವರಕ್ಷಕ ವಾಹನದಲ್ಲಿ ಮೂರು ಮಂದಿ ಇದ್ದು ಅವರನ್ನು ತಕ್ಷಣ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಬೆಳ್ತಂಗಡಿ ಬಾಬಾ ಆಂಬುಲೆನ್ಸ್ ಜಲೀಲ್ ತಕ್ಷಣ ದೌಡಾಯಿಸಿ ಕೊಂಡೊಯ್ಯಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಸೈಂಟ್ ಜೊಸೆಫ್ ಆಸ್ಪತ್ರೆಯ ಆಂಬುಲೆನ್ಸ್ ಮಂಗಳೂರಿಗೆ ಹೊರಟಿತ್ತು . ಆದ್ರೆ ಇದಕ್ಕೆ ಚಾಲಕ ಇರಲ್ಲಿಲ್ಲ. ಬದಲಾಗಿ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ಝಬೇರ್(23) ಬಂದಿದ್ದು ಹೋಗುವಾಗ ಡಾಕ್ಟರ್ ನಿತೀನ್ ಚಾಲನೆ ಮಾಡಿದ್ದರು. ಮಂಡತ್ಯಾರಿನಿಂದ ವಾಪಸ್ ಬರುವಾಗ ಝುಬೇರ್ ಕೂತಿದ್ದರು. ಮತ್ತೊಬ್ಬ ಕ್ಷ ಕಿರಣ ತಂತ್ರಜ್ಞ ರತೀಶ್(24) ಕೂಡ ವಾಹನದಲ್ಲಿದ್ದರು.ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತ್ತಿದ್ದ ಡಾಕ್ಟರ್ ನಿತೀನ್ ಎಂಬವರಿಗೆ ಬಲ ಗೈ ಮತ್ತು ತಲೆಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸಲಾಗಿದೆ. ಮಾಹಿತಿಗಳ ಪ್ರಕಾರ ಡಾಕ್ಟರ್ ನಿತೀನ್ ಕುಡಿದಿದ್ದರು. ಈ ವೇಳೆ ಚಾಲಕನ ಕೈ ಎಳೆದಾಡಿದಾಗ ಘಟನೆ ನಡೆದಿದೆ ಎನ್ನಲಾಗಿದೆ. ಝಬೇರ್ ಮತ್ತು ರತೀಶ್ ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳದಲ್ಲಿ ಟ್ರಾಪಿಕ್ ಜಾನ್ ಅಗಿತ್ತು ಬೆಳ್ತಂಗಡಿ ಸಂಚಾರಿ ಪೊಲೀಸರು ಬಂದು ಸುಗಮ ಸಂಚಾರ ಮಾಡಿಕೊಟ್ಟಿದ್ದಾರೆ.