Friday, April 26, 2024
Homeಕರಾವಳಿಉಪ್ಪಿನಂಗಡಿ: ಅಕ್ರಮ ಮರ ಸಾಗಾಟ ಪ್ರಕರಣ; 1 ವರ್ಷದ ಬಳಿಕ ಮರ ಸಾಗಾಟಕ್ಕೆ ಬಳಸಿದ್ದ ಪಿಕಪ್...

ಉಪ್ಪಿನಂಗಡಿ: ಅಕ್ರಮ ಮರ ಸಾಗಾಟ ಪ್ರಕರಣ; 1 ವರ್ಷದ ಬಳಿಕ ಮರ ಸಾಗಾಟಕ್ಕೆ ಬಳಸಿದ್ದ ಪಿಕಪ್ ವಶಪಡಿಸಿಕೊಂಡ ಅರಣ್ಯಾಧಿಕಾರಿಗಳು

spot_img
- Advertisement -
- Advertisement -

ಉಪ್ಪಿನಂಗಡಿ: 2021ರ ಆಗಸ್ಟ್ 18 ರಂದು ಶಿರಾಡಿಯ ಶಿಶಿಲ ಮೀಸಲು ಅರಣ್ಯದಿಂದ ಅಕ್ರಮವಾಗಿ ಹೆಬ್ಬಲಸು ಮರಗಳನ್ನು ಕಡಿದು ಸಾಗಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗಾಟಕ್ಕೆ ಬಳಸಿದ ವಾಹನವನ್ನು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮಧುಸೂಧನ್ ಎ. ನೇತೃತ್ವದ ತಂಡ ಮಡಿಕೇರಿಯ ಸಿದ್ದಾಪುರದಲ್ಲಿ ಪತ್ತೆ ಹಚ್ಚಿ, ವಶಕ್ಕೆ ಪಡೆದುಕೊಂಡಿದೆ.

2021ರ ಆಗಸ್ಟ್ 18 ರಂದು ಶಿರಾಡಿ ಅರಣ್ಯದಿಂದ ಭಾರಿ ಗಾತ್ರದ ಮೂರು ಹೆಬ್ಬಲಸು ಮರಗಳು ಕಳವಾಗಿತ್ತು. ಕಳವಾದ ಈ ಮರಗಳನ್ನು ಕೊಲ್ಪೆಯ ಮನೆಯೊಂದರಿಂದ ವಶಕ್ಕೆ ಪಡೆಯಲಾಗಿತ್ತು. ಅಲ್ಲದೇ ಆರೋಪಿಗಳಾದ ರಝಾಕ್, ಸಿದ್ದೀಕ್, ಶರೀಫ್ ಎಂಬವರನ್ನು ಬಂಧಿಸಲಾಗಿತ್ತು. ಆದರೆ ಸಾಗಾಟಕ್ಕೆ ಬಳಸಿದ ಪಿಕಪ್ ವಾಹನ ಮಾತ್ರ ಪತ್ತೆಯಾಗಿರಲಿಲ್ಲ. ಇದರ ತನಿಖೆ ನಡೆಸುತ್ತಿದ್ದ ಮಧುಸೂಧನ್ ನೇತೃತ್ವದ ತಂಡ ಮಡಿಕೇರಿಯ ಸಿದ್ದಾಪುರದಲ್ಲಿ ಈ ವಾಹನ ಇರುವ ಕುರಿತು ಮಾಹಿತಿ ಕಲೆ ಹಾಕಿ, ಅಲ್ಲಿನ ವಲಯ ಅರಣ್ಯಾಧಿಕಾರಿ ಅಶೋಕ್‍ರವರ ಸಹಕಾರ ಪಡೆದು, ವಾಹನವನ್ನು ವಶಕ್ಕೆ ತೆಗೆದುಕೊಂಡಿದೆ.

 ಈ ಕಾರ್ಯಾಚರಣೆಯಲ್ಲಿ ಶಿರಾಡಿ ಉಪ ಅರಣ್ಯಧಿಕಾರಿ ಧೀರಜ್, ಅರಣ್ಯ ರಕ್ಷಕ ಸುನೀಲ್ ನಾಯ್ಕ, ಪ್ರಶಾಂತ್ ಮಾಳಗಿ, ನಿಂಗಪ್ಪ ಭಾಗವಹಿಸಿದರು.

- Advertisement -
spot_img

Latest News

error: Content is protected !!