- Advertisement -
- Advertisement -
ಉಡುಪಿ: ಬಹುಭಾಷಾ ಸಿನಿಮಾ ನಟಿ ಪೂಜಾ ಹೆಗ್ಡೆ ಇಂದು ಕಾರ್ಕಳ ತಾಲೂಕಿನ ಕಣಂಜಾರುಗೆ ಭೇಟಿ ನೀಡಿದ್ದರು.
ಕಣಂಜಾರು ಬ್ರಹ್ಮಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಹಿನ್ನಲೆಯಲ್ಲಿ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪೂಜಾ ಹೆಗ್ಡೆ, ದೇವರ ದರ್ಶನ ಪಡೆದರು.
ನಂತರ ಬ್ರಹ್ಮಕಲಶೋತ್ಸವದ ಸಭಾ ಕಾರ್ಯಕ್ರಮದಲ್ಲಿ ಭಾಗಿಯಾದ ನಟಿ ಪೂಜಾ ಹೆಗ್ಡೆ ಅವರನ್ನು ದೇವಸ್ಥಾನದ ಸಮಿತಿಯ ವತಿಯಿಂದ ಗೌರವಿಸಲಾಯಿತು.
ಇದೇ ವೇಳೆ ಅಭಿಮಾನಿಯೊರ್ವ ರಚಿಸಿದ ತಮ್ಮದೇ ಭಾವಚಿತ್ರವನ್ನು ಸನ್ಮಾನ ಸಂದರ್ಭದಲ್ಲಿ ಪೂಜಾ ಹೆಗ್ಡೆ ಸ್ವೀಕರಿಸಿದರು.
- Advertisement -