Friday, June 27, 2025
Homeತಾಜಾ ಸುದ್ದಿನಟ ದರ್ಶನ್ ಅವರ ಭೇಟಿ ಸಾಧ್ಯವಾಗದೇ ವಾಪಾಸ್ ತೆರಳಿದ ನಟ ಸಾಧುಕೋಕಿಲ

ನಟ ದರ್ಶನ್ ಅವರ ಭೇಟಿ ಸಾಧ್ಯವಾಗದೇ ವಾಪಾಸ್ ತೆರಳಿದ ನಟ ಸಾಧುಕೋಕಿಲ

spot_img
- Advertisement -
- Advertisement -

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿ ನಿನ್ನೆಗೆ ಜೈಲು ಸೇರಿ ನಿನ್ನೆ ಒಂದು ತಿಂಗಳಾಯ್ತು. ಈಗಾಗಲೇ ಸಾಕಷ್ಟು ಮಂದಿ ಅವರನ್ನು ದರ್ಶನ್ ಭೇಟಿಯಾಗಿದ್ದಾರೆ. ಇನ್ನು ಇಂದು ದರ್ಶನ್ ಅವರನ್ನು ಭೇಟಿಯಾಗೋದಕ್ಕೆ ನಟ ಸಾಧುಕೋಕಿಲ ಅವರು ಆಗಮಿಸಿದ್ದರು.ಆದರೆ ಸಾಧು ಕೋಕಿಲ ಅವರು ಅವಕಾಶ ಸಿಗದೇ ವಾಪಸ್ ಹೋಗಿದ್ದಾರೆ.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವಾರ ನಟ ದರ್ಶನ್ ಭೇಟಿ ಮಾಡಲು ಇರುವ ಅವಕಾಶಗಳು ಮುಕ್ತಾಯಗೊಂಡಿವೆ. ಈ ಹಿನ್ನೆಲೆಯಲ್ಲಿ ಗುರುವಾರ ದರ್ಶನ್ ಕುಟುಂಬದವರು ಬಂದು ಭೇಟಿ ಮಾಡಲಿದ್ದಾರೆ. ಅವರೊಂದಿಗೆ ನಾನು ಕೂಡ ಬಂದು ದರ್ಶನ್ ಭೇಟಿ ಮಾಡುತ್ತೇನೆ. ಇನ್ನು ಒಬ್ಬೊಬ್ಬರೇ ಬಂದು ನೋಡಿದರೆ ಒಂದು ಭೇಟಿಯ ಸಂಪೂರ್ಣ ಅವಕಾಶವೇ ಮುಗಿದು ಹೋಗಲಿದೆ. ನಾನು ಭೇಟಿ ಆದ್ರೆ‌ ಈ ವಾರದಲ್ಲಿ ಬೇರೆಯವರಿಗೆ ಅವಕಾಶ ಆಗ್ತಿರಲಿಲ್ಲ. ಹಾಗಾಗಿ ಗುರುವಾರ ಬರ್ತೀನಿ ಎಂದು ವಾಪಾಸ್ ತೆರಳಿದರು.

ಈಗಾಗಲೇ ನಟ ದರ್ಶನ್‌ ಅವರನ್ನು ಭೇಟಿ ಮಾಡಿವುದಕ್ಕೆ ವಾರಕ್ಕೆ ಎರಡೇ ಬಾರಿ ಅವಕಾಶ ನೀಡಲಾಗುತ್ತದೆ. ಅದರಂತೆ ಈಗಾಗಲೇ ಎರಡು ಬಾರಿ ಭೇಟಿ ಮಾಡುವ ಅವಕಾಶ ಮುಕ್ತಾಯಗೊಂಡಿದೆ. ಈಗ ಯಾರೇ ಬಂದರೂ ನಟ ದರ್ಶನ್ ಭೇಟಿ ಮಾಡಲು ಅವಕಾಶವಿಲ್ಲ ಎಂದು ಜೈಲಿನ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಸ್ಯನಟ ಸಾಧುಕೋಕಿಲ ಅವರು ಜೈಲಿನಿಂದ ವಾಪಸ್ ಮನೆಯೆಡೆಗೆ ವಾಪಸ್ ಹೋಗಿದ್ದಾರೆ. ಇನ್ನು ನಟ ದರ್ಶನ್‌ಗೆ ಭೇಟಿ ಮಾಡಲು ಗುರುವಾರ ಅವಕಾಶ ಸಿಗಲಿದೆ ಎಂದಿದ್ದಾರೆ.

- Advertisement -
spot_img

Latest News

error: Content is protected !!