- Advertisement -
- Advertisement -
ವಿಜಯನಗರ: ಜಿಲ್ಲೆಯ ಹೊಸಪೇಟೆಯಲ್ಲಿ ದಿವಗಂತ ನಟ ಪುನೀತ್ ರಾಜ್ ಕುಮಾರ್ ಅವರ 7.4 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.
ಅದ್ದೂರಿ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳ ಮುಂದೆ ಅಪ್ಪು ಪ್ರತಿಮೆಯನ್ನು ಸಹೋದರ ನಟ ರಾಘವೇಂದ್ರ ರಾಜ್ ಕುಮಾರ್ ಅನಾವರಣ ಮಾಡಿದರು. ನಗರದ ವಡಕರಾಯ ದೇಗುಲದಿಂದ ಪುನೀತ್ ರಾಜ್ ಕುಮಾರ ಅವರ ಅಮರ ಜ್ಯೋತಿಯನ್ನು ಅಭಿಮಾನಿಗಳು ಮೆರವಣಿಗೆಯಲ್ಲಿ ತಂದರು.
ಸ್ಥಳೀಯ ಕಲಾವಿದರು,ಡ್ಯಾನ್ಸ್ ಕಲಾವಿದ ಹುಡುಗರು ಹಾಗು ಚಿತ್ರ ಕಲಾವಿದರು ರಸಮಂಜರಿ ಕಾರ್ಯಕ್ರಮ ನೀಡಿದರು.
- Advertisement -