Tuesday, May 7, 2024
Homeಕರಾವಳಿಉಡುಪಿ‘ಕರಾವಳಿ’ಯಲ್ಲಿ ನಟ ಪ್ರಜ್ವಲ್ ದೇವರಾಜ್; ಮೂಡಬಿದಿರೆ, ಉಡುಪಿ ಸುತ್ತಮುತ್ತ ಫೆ.22 ರಿಂದ ಚಿತ್ರೀಕರಣ ಆರಂಭ

‘ಕರಾವಳಿ’ಯಲ್ಲಿ ನಟ ಪ್ರಜ್ವಲ್ ದೇವರಾಜ್; ಮೂಡಬಿದಿರೆ, ಉಡುಪಿ ಸುತ್ತಮುತ್ತ ಫೆ.22 ರಿಂದ ಚಿತ್ರೀಕರಣ ಆರಂಭ

spot_img
- Advertisement -
- Advertisement -

ಕರಾವಳಿಯಲ್ಲಿ ಚಿತ್ರೀಕರಣಗೊಳ್ಳಲಿರುವ ಗುರುದತ್ ಗಾಣಿಗ ಆ್ಯಕ್ಷನ್ ಕಟ್ ಮಾಡಿರುವ ಪ್ರಜ್ವಲ್ ದೇವರಾಜ್ ನಟನೆಯ 40ನೇ ಸಿನಿಮಾ ‘ಕರಾವಳಿ’ಯ ಮುಹೂರ್ತವು ಬೆಂಗಳೂರಿನ ಬಸವನಗುಡಿ ದೇವಸ್ಥಾನದಲ್ಲಿ (ಫೆ.20) ಮಂಗಳವಾರದಂದು ನಡೆಯಿತು

ಈ ಸಿನಿಮಾದ ಚಿತ್ರೀಕರಣವು ಮೂಡಬಿದಿರೆ, ಉಡುಪಿಯ ಸುತ್ತಮುತ್ತಲೂ ಫೆ.22ರಿಂದ ಆರಂಭವಾಗಲಿದೆ.

ಸಿನಿಮಾದ ಕುರಿತು ಮಾತನಾಡಿದ ಗುರುದತ್ ಗಾಣಿಗ, ‘ಕಾಂತಾರ’ ಸಿನಿಮಾದ ಕಥೆಗೂ ನಮ್ಮ ಕಥೆಗೂ ಯಾವುದೇ ಸಂಬಂಧವಿಲ್ಲ. ಕೋಣ ಎನ್ನುವುದು ನಮ್ಮ ಚಿತ್ರದ ಭಾಗ. ಒಂದು ಕಂಬಳದ ಹಿಂದೆ ಇರುವ ಶ್ರಮ ಊಹೆಗೆ ನಿಲುಕದ್ದು. ಅದರ ಹಿಂದ ಒಂದು ಜೀವನವಿದೆ. ಇದು ನಮ್ಮ ಮಣ್ಣಿನ ಸಿನಿಮಾಗಿದ್ದು, ದೈವಾರಾಧನೆ ಅಂಶಗಳಿಲ್ಲ. ಜಾತ್ರೆ, ಕಂಬಳದ ಘಮಲಿದೆ. ಕಂಬಳದ ಕೋಣಗಳನ್ನು ಮನೆಯ ಸದಸ್ಯರೆಂಬಂತೆ ಸಾಕುತ್ತಾರೆ. ನಮ್ಮ ಕಥೆಯೂ ಅಂತಹದೇ ಸೂಕ್ಷ್ಮವನ್ನು ಹೇಳುತ್ತದೆ,’ ಎಂದು ತಿಳಿಸಿದರು.

ಸಿನಿಮಾದ ನಾಯಕ ಪ್ರಜ್ವಲ್ ದೇವರಾಜ್, ‘ಕರಾವಳಿ’ಗಾಗಿ ಆ ಭಾಗದ ಕನ್ನಡ ಭಾಷೆಯನ್ನು ಕಲಿಯುತ್ತಿದ್ದೇನೆ. ‘ಧನಂಜಯ’ ಎಂಬ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳಲಿದ್ದು, ಕಂಬಳದ ಕೋಣಗಳ ಜೊತೆ ತರಬೇತಿ ಪಡೆಯಬೇಕಾಗಿದೆ. ಕಂಬಳದ ಕೋಣಗಳನ್ನು ಬೆಳೆಸುವ ಕುಟುಂಬದಿಂದ ಬಂದಾತ ಧನಂಜಯ. ಕೋಣಗಳ ಜೊತೆ ‘ಧನಂಜಯ’ ಬೆಳೆಯುತ್ತಾನೆ. 80 ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಯಲಿದೆ. ಈ ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಈ ವರ್ಷ ‘ಮಾಫಿಯಾ’, ‘ಗಣ’ ಮತ್ತು ‘ರಾಕ್ಷಸ’ ಬಿಡುಗಡೆಯಾಗಲಿದೆ’ ಎಂದರು

- Advertisement -
spot_img

Latest News

error: Content is protected !!