- Advertisement -
- Advertisement -
ನಾಳೆ ಶುಕ್ರವಾರ ನಟ ಅಕ್ಷಯ್ ಕುಮಾರ್ ಅವರ “ಸಾಮ್ರಾಟ್ ಪೃಥ್ವಿರಾಜ್” ಚಿತ್ರ ತೆರೆಗೆ ಬರಲಿದೆ. ತನ್ನ ಚಿತ್ರದ ಪ್ರಚಾರದಲ್ಲಿ ತೊಡಗಿರುವ ಅಕ್ಷಯ್ ಕುಮಾರ್ ಶಾಲಾ ಇತಿಹಾಸ ಪುಸ್ತಕಗಳ ಕುರಿತು ಹೇಳಿಕೆಯನ್ನು ನೀಡಿದ್ದು, ಇಂಟರ್ ನೆಟ್ ನಲ್ಲಿ ಪರ ವಿರೋಧ ಚರ್ಚೆಗೆ ಕಾರಣವಾಗಿದೆ.
ಮಕ್ಕಳ ಇತಿಹಾಸ ಪಠ್ಯ ಪುಸ್ತಕಗಳು ದಾಳಿಕೋರರ ಮಾಹಿತಿಯಿಂದ ತುಂಬಿವೆ. ಅದರಲ್ಲಿ ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್ ಸೇರಿದಂತೆ ರಾಜರ ಬಗ್ಗೆ ಕೇವಲ ಎರಡು ಸಾಲುಗಳಲ್ಲಿ ವಿವರಿಸಲಾಗಿದೆ ಎಂದು ಅಕ್ಷಯ್ ಕುಮಾರ್ ಹೇಳಿದ್ದರು. ಈ ಹೇಳಿಕೆಯನ್ನು ಕೆಲವರು ಗಂಭೀರವಾಗಿ ಪರಿಗಣಿಸಿದರೆ, ಇನ್ನೂ ಕೆಲವರು ಟ್ರೋಲ್ ಮಾಡಿದ್ದಾರೆ.
- Advertisement -