- Advertisement -
- Advertisement -
ಪುತ್ತೂರು: ಹಳೆ ಪ್ರಕರಣಯೊಂದಕ್ಕೆ ಸಂಬಂಧಿಸಿ ಹಲವು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ಕಾಸರಗೋಡು ತಾಲೂಕಿನ ಚಟ್ಟಂಗಲ್ ಅಯ್ಯಪ್ಪ ಭಜನಾ ಮಂದಿರದ ಬಳಿ ನಿವಾಸಿ
ಬಂಧಿತ ಆರೋಪಿ.
ಆರೋಪಿಯನ್ನು ಪುತ್ತೂರು ಗ್ರಾಮಾಂತರ ಠಾಣಾ ಉಪನೀರಿಕ್ಷಕ ಉದಯ ರವಿ ಮತ್ತು ಅಮಿನ್ ಸಾಬ್ಅತ್ತಾರ್ ರವರ ಸಲಹೆಯಂತೆ ಪುತ್ತೂರು ಸಿಬ್ಬಂದಿಗಳಾದ ಎಚ್ ಸಿ ಧರ್ಮಪಾಲ, ಕೃಷ್ಣಪ್ಪ, ಪ ಶಿವಾನಂದ ಕೆ ,ಗಿರೀಶ್ ಅವರು ತಲೆ ಮರೆಸಿಕೊಂಡಿರುವ ವಾರಂಟು ಆಸ್ಸಾಮಿಯನ್ನು ಕೇರಳ ರಾಜ್ಯದ ಕಾಸರಗೋಡು ತಾಲೂಕು ಚಟ್ಟಂಗಲ್ ಗ್ರಾಮದ ಚಟ್ಟಂಗಲ್ ಎಂಬಲ್ಲಿರುವ ಆರೋಪಿಯ ಮನೆಯ ಬಳಿಯಿಂದ ದಸ್ತಗಿರಿ ಮಾಡಿದ್ದಾರೆ.
ನ್ಯಾಯಾಲಯಕ್ಕೆ ಹಾಜರುಪಡಿಸುತಿದ್ದು, ಆಸಾಮಿಯ ಮೇಲೆ ಪುತ್ತೂರು ನಗರ ಠಾಣೆ, ಸುಳ್ಯಮಡಿಕೇರಿ, ಕೇರಳ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣಗಳಿದ್ದು, ಈತನ ಬಗ್ಗೆ PSI ಪುತ್ತೂರು ಗ್ರಾಮಾಂತರ ಠಾಣೆ ಯನ್ನು ಸಂಪರ್ಕ ಮಾಡಬಹುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.
- Advertisement -