- Advertisement -
- Advertisement -
ವಿಟ್ಲ;ಬೋರ್ವೆಲ್ ಲಾರಿ ಹಾಗೂ ಆಕ್ಟೀವಾ ನಡುವೆ ಅಪಘಾತ ಸಂಭವಿಸಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಟ್ಲದ ಉಕ್ಕುಡ ಅಪ್ಪೇರಿಪಾದೆ ಎಂಬಲ್ಲಿ ಇಂದು ಮಧ್ಯಾಹ್ನ ನಡೆದಿದೆ. ರಂಜಿತ್ (20) ಮೃತ ಯುವಕ.
ಪಣೋಲಿಬೈಲು ಮೂಲದ ರಂಜಿತ್ ವಿಟ್ಲ ಆಲಂಗಾರು ಎಂಬಲ್ಲಿ ಸಂಬಂಧಿಕರ ಮನೆಯಲ್ಲಿ ವಾಸವಿದ್ದ. ಅಲ್ಲಿಂದಲೇ ಲಾರಿಗೆ ಕಲ್ಲು ಲೋಡ್ ಮಾಡಲು ಹೋಗುತ್ತಿದ್ದ ಎನ್ನಲಾಗಿದೆ. ಆಕ್ಟಿವಾದಲ್ಲಿದ್ದ ಇನ್ನೋರ್ವ ಸವಾರನಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
- Advertisement -