- Advertisement -
- Advertisement -
ಚಿಕ್ಕಮಗಳೂರು: ಜಲಪಾತದ ಮೇಲೆ ನಿಂತು ಸೆಲ್ಫಿ ತೆಗೆಯುತ್ತಿದ್ದ ವೇಳೆ ಕಾಲುಜಾರಿ ಬಿದ್ದ ಘಟನೆ ಜಿಲ್ಲೆಯ ಕೊಟ್ಟಿಗೆಹಾರದ ಚಾರ್ಮಾಡಿ ಘಾಟ್ ನ ಆಲೆಕಾನ್ ಜಲಪಾತದ ಬಳಿ ನಡೆದಿದೆ.
80 ಅಡಿ ಜಲಪಾತದಿಂದ ಕೆಳಕ್ಕೆ ಬಿದ್ದ ಯುವಕನನ್ನು ಚಾಲಕ ಅಭಿಲಾಶ್ (22 ವರ್ಷ) ಎಂದು ಗುಉತಿಸಲಾಗಿದ್ದು, ಮೂಲತಃ ಪಾವಗಡ ಮೂಲದವನು.ಅವಘಡದಲ್ಲಿ ಕೈ ಮತ್ತು ಕಾಲು ತುಂಡಾಗಿದ್ದು, ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ.
ಗೂಡ್ಸ್ ವಾಹನದಲ್ಲಿ ಬಂದಿದ್ದ , ಒಟ್ಟು ಮೂವರು ಯುವಕರು ಜಲಪಾತದ ಮೇಲೆ ನಿಂತು ಸೆಲ್ಫಿ ತೆಗೆಯುತ್ತಿದ್ದ ವೇಳೆಯಲ್ಲಿ ಒಬ್ಬ ಯುವಕ ಜಾರಿ ಬಿದ್ದಿದ್ದಾನೆ.ಜೊತೆಗೆ ಅವನ ಬಳಿ ಇದ್ದ ವಾಹನದ ಕೀ ಮತ್ತು ಮೊಬೈಲ್ ಕೂಡ ನೀರು ಪಾಲಾಗಿದೆ.ಜೊತೆಯಲ್ಲಿದ್ದ ಇಬ್ಬರು ಕೆಳಗೆ ಇಳಿದು ಅವನನ್ನು ಮೇಲೆ ಎತ್ತಿಕೊಂಡು ಬಂದಿದ್ದಾರೆ. ವಿಷಯ ತಿಳಿದ ಬಣಕಲ್ ಪೊಲೀಸರು ಮತ್ತು 112 ಹಾಗೂ ಸಮಾಜ ಸೇವಕ ಆರಿಫ್ ಸ್ಥಳಕ್ಕೆ ಧಾವಿಸಿದ್ದಾರೆ.
- Advertisement -