- Advertisement -
- Advertisement -
ಮಧ್ಯ ಪ್ರದೇಶ: ಇಲ್ಲಿನ ಚಂಬಲ್ ಪ್ರಾಂತ್ಯದಲ್ಲಿ ಒಂದು ಕಾಲದಲ್ಲಿ ನಡುಕ ಹುಟ್ಟಿಸಿದ್ದ ಡಕಾಯಿತರು ಹಾಗೂ ಅವರನ್ನ ಭೇದಿಸಲು ಪೊಲೀಸರು ಪಟ್ಟ ಸಾಹಸವನ್ನ ಭಿಂದ್ ಜಿಲ್ಲೆಯ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗುತ್ತಿದೆ. ಈಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.
ಈ ವಸ್ತು ಸಂಗ್ರಹಾಲಯದಲ್ಲಿ ಮುಖ್ಯ ವಾಗಿ ಈ ವೇಳೆ ಕಾರ್ಯಕ್ಷಮತೆ ಮೆರೆದ ಅಧಿಕಾರಿಗಳು ,ಡಕಾಯಿತೆ ಹಾಗೂ ಮಾಜಿ ಸಂಸದೆ ಫೂಲನ್ ದೇವಿ, ಡಕಾಯಿತ ಮಲ್ಖಾನ್ ಸಿಂಗ್, ಡಕಾಯಿತನಾಗಿ ಪರಿವರ್ತಿತನಾದ ಕ್ರೀಡಾಪಟು ಪಾನ್ ಸಿಂಗ್ ತೋಮರ್ ಅವರ ಕತೆಗಳನ್ನ ಪ್ರದರ್ಶಿಸಲಾಗುವುದು ಎಂದು ಆಡಳಿತ ಮಂಡಳಿ ಹೇಳಿದೆ.
- Advertisement -