Saturday, April 27, 2024
Homeಕರಾವಳಿಉಡುಪಿಶಿರ್ವ: ಕಾಲೇಜು ಆವರಣದಲ್ಲಿಯೇ ಬೀದಿ ನಾಯಿಯನ್ನು ಹೊಡೆದು ಕೊಂದ ಸಿಬ್ಬಂದಿ: ದೂರು ದಾಖಲು

ಶಿರ್ವ: ಕಾಲೇಜು ಆವರಣದಲ್ಲಿಯೇ ಬೀದಿ ನಾಯಿಯನ್ನು ಹೊಡೆದು ಕೊಂದ ಸಿಬ್ಬಂದಿ: ದೂರು ದಾಖಲು

spot_img
- Advertisement -
- Advertisement -

ಶಿರ್ವ:  ಕಾಲೇಜು ಆವರಣದಲ್ಲಿಯೇ ಬೀದಿ ನಾಯಿಯನ್ನು ಹೊಡೆದು ಕೊಂದ ವೀಡಿಯೋ ಒಂದು ವೈರಲ್ ಆಗಿದ್ದು, ಘಟನೆ ಸಂಬಂಧ ಕಾಲೇಜು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಶಿರ್ವದ ಬಂಟಕಲ್ ಮಧ್ವ ವಾದಿರಾಜ ಕಾಲೇಜಿನ ಆವರಣದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ವಾರ್ಡನ್ ರಾಜೇಶ್‌ ಮತ್ತು ಗಾರ್ಡನರ್‌ ನಾಗರಾಜ್‌ ಎಂಬಿಬ್ಬರು ಸೇರಿ ಕೋಲಿನಿಂದ ಹೊಡೆದು ನಾಯಿಯನ್ನು ಸಾಯಿಸಿದ್ದಾರೆ. ಇದನ್ನ ವಿದ್ಯಾರ್ಥಿಯೊಬ್ಬ ವೀಡಿಯೋ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದು, ವೈರಲ್‌ ಆಗಿದೆ. ಈ ವೀಡಿಯೋ ನೋಡಿದ ಪ್ರಾಣಿ ದಯಾ ಸಂಘದವರು ಕಾಪು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -
spot_img

Latest News

error: Content is protected !!