- Advertisement -
- Advertisement -
ಕಾಸರಗೋಡು: ವಿವಾಹ ದಿನದಂದೇ ಪೊಲೀಸ್ ಪೇದೆ ನೇಣು ಬಿಗಿದು ಸಾವನ್ನಪ್ಪಿದ ಘಟನೆ ಕೆಯ್ಯುರಿನಲ್ಲಿ ನಡೆದಿದೆ. ಮೃತಪಟ್ಟವರು ಕಯ್ಯೂರ್ ಅಲಂತಟ್ಟಿನ ವಿನೀಶ್ (29) ಎಂದು ಹೇಳಲಾಗಿದೆ.
ಕಾಸರಗೋಡು ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಪೇದೆಯಾಗಿದ್ದರು. ಬಾನುವಾರ ವಿವಾಹ ನಡೆಯಬೇಕಿತ್ತು. ಬೆಳಿಗ್ಗೆ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಚಿಮೇನಿ ಠಾಣಾ ಪೊಲೀಸರು ತನಿಖೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
- Advertisement -