Wednesday, May 22, 2024
Homeಕರಾವಳಿಉಳ್ಳಾಲ: ಮೀನಿನ ಧಕ್ಕೆಗೆ ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆ

ಉಳ್ಳಾಲ: ಮೀನಿನ ಧಕ್ಕೆಗೆ ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆ

spot_img
- Advertisement -
- Advertisement -

ಉಳ್ಳಾಲ: ಮನೆಯಿಂದ ಮಂಗಳೂರಿನ ಮೀನಿನ ಧಕ್ಕೆಗೆ ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆಯಾಗಿರುವ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋಟೆಕಾರು ಪನೀರ್ ಹಿದಾಯತ್ ನಗರ ನಿವಾಸಿ ರೆಹಮತುಲ್ಲಾ ಯಾನೆ ಮುನ್ನಾ (55) ನಾಪತ್ತೆಯಾದವರು.

ಜ.1 ರಂದು ಮನೆಯಿಂದ ಹೋದವರು ವಾಪಸ್ಸಾಗದೇ ನಾಪತ್ತೆಯಾಗಿದ್ದಾರೆ. ಈ ಕುರಿತು ಮನೆಮಂದಿ ಎಲ್ಲಾ ಕಡೆ ಹುಡುಕಾಡಿ ಧಕ್ಕೆಯಲ್ಲಿ ವಿಚಾರಿಸಿದಾಗ ರೂ.12,000 ಹಣವನ್ನು ಪರಿಚಿತರಿಂದ ಪಡೆದುಕೊಂಡು ಹೋಗಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಪತ್ನಿ ಸಾಹಿರಾ ಭಾನು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಂತೆ ನಾಪತ್ತೆ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!