- Advertisement -
- Advertisement -
ಬಜ್ಪೆ: ಬಾವಿಗೆ ಆಯತಪ್ಪಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಇಂದು ನಡೆದಿದೆ. ಕೊಳಂಬೆ ತಲ್ಲದ ಬೈಲು ನಿವಾಸಿ ಪದ್ಮನಾಭ ಬೆಲ್ನಡ (51) ಮೃತಪಟ್ಟ ವ್ಯಕ್ತಿ.
ಮನೆಯ ಸಮೀಪವಿದ್ದ ಆವರಣವಿಲ್ಲದ ಬಾವಿಯ ಬಳಿ ತೆರಳಿದಾಗ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಶವ ಮೇಲಕ್ಕೆತ್ತಿದ್ದು, ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ.
- Advertisement -