- Advertisement -
- Advertisement -
ಅಮರಾವತಿ: ಕೊರೋನಾ ವಿಶ್ವವನ್ನೇ ದಂಗುಗೊಳಿಸಿದ ಬೆನ್ನಲ್ಲೇ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಎಲೂರು ಪಟ್ಟಣದಲ್ಲಿ ವಿಚಿತ್ರ ರೋಗವೊಂದು ವರದಿಯಾಗಿದೆ. ಈ ರೋಗದಿಂದ 290 ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೂರ್ಚೆ ರೋಗದ ಲಕ್ಷಣಗಳನ್ನು ಹೋಲುವ ಖಾಯಿಲೆ ಇದಾಗಿದ್ದು ರೋಗದ ಬಗ್ಗೆ ಸರಿಯಾಗಿ ಮಾಹಿತಿ ಇಲ್ಲ. ಒಂದೇ ಬಾರಿಗೆ 200ಕ್ಕೂ ಹೆಚ್ಚು ಮಂದಿ ಒಂದೇ ರೀತಿಯ ರೋಗ ಲಕ್ಷಣ ಕಂಡುಬಂದಿದೆ. ಆರೋಗ್ಯ ಮತ್ತು ವೈದ್ಯಕೀಯ ತಜ್ಞರು ಈ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ಚಿಕಿತ್ಸೆ ಪಡೆದು ಇಲ್ಲಿಯವರೆಗೂ 70 ರೋಗಿಗಳು ಬಿಡುಗಡೆಯಾಗಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ವಿಜಯವಾಡದಲ್ಲಿ ತುರ್ತು ಆರೋಗ್ಯ ಕೇಂದ್ರವನ್ನು ಸ್ಥಾಪಿಸಲಾಗಿದೆ.
- Advertisement -