Monday, June 30, 2025
Homeತಾಜಾ ಸುದ್ದಿಪ್ರಧಾನಿ ಗೆ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ರೈತ-ತನ್ನ ಅಂಗಾಂಗ ಮಾರಾಟ ಮಾಡಿ ಸಾಲ ತೀರಿಸಿ...

ಪ್ರಧಾನಿ ಗೆ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ರೈತ-ತನ್ನ ಅಂಗಾಂಗ ಮಾರಾಟ ಮಾಡಿ ಸಾಲ ತೀರಿಸಿ ಎಂದ ನೇಗಿಲ ಯೋಗಿ!..

spot_img
- Advertisement -
- Advertisement -

ಭೋಪಾಲ್​: ಇಲ್ಲಿನ ಛತರ್​ಪುರ್​ ಜಿಲ್ಲೆಯ ರೈತನೊಬ್ಬ ಆತ್ಮಹತ್ಯೆಗೆ ಶರನಾಗಿದ್ದಾನೆ. ಈತನು ಗ್ರಾಮದಲ್ಲಿರುವ ವಿದ್ಯುತ್​ ವಿತರಣಾ ಕಂಪನಿಯಲ್ಲಿ ಸಾಲ ಮಾಡಿದ್ದು ಅವರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳಲಾಗಿದೆ.

ಮುನೇಂದ್ರ ರಜಪೂತ್​ ಆತ್ಮಹತ್ಯೆ ಮಾಡಿಕೊಂಡ ರೈತ. ಸಾಯುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ರೈತ ಡೆತ್​ನೋಟ್​ ಬರೆದಿಟ್ಟಿದ್ದು, ಮೃತದೇಹವನ್ನು ಸರ್ಕಾರಕ್ಕೆ ಹಸ್ತಾಂತರಿಸಿ, ದೇಹದ ಪ್ರತಿಯೊಂದು ಅಂಗವನ್ನು ಮಾರಾಟ ಮಾಡಿ ಸಾಲ ತೀರಿಸುವಂತೆ ಕೋರಿದ್ದಾನೆ. ಸುಮಾರು 87,000 ರೂ. ವಿದ್ಯುತ್​ ಬಿಲ್​ ಬಾಕಿ ಉಳಿಸಿಕೊಂಡಿದ್ದಕ್ಕೆ ವಿದ್ಯುತ್​ ವಿತರಣ ಕಂಪನಿ ರೈತನ ಹಿಟ್ಟಿನ ಗಿರಣಿ ಮತ್ತು ಮೋಟರ್​ ಸೈಕಲ್​ ವಶಪಡಿಸಿಕೊಂಡಿತ್ತು ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.

- Advertisement -
spot_img

Latest News

error: Content is protected !!