Thursday, June 26, 2025
Homeಅಪರಾಧಕರ್ತವ್ಯನಿರತ ವೈದ್ಯರೊಬ್ಬರ ಶರ್ಟ್ ಹರಿದು ಹಲ್ಲೆ; ಘಟನೆಯಲ್ಲಿ ಮಹಿಳಾ ಸಿಬ್ಬಂದಿಗೂ ಹಲ್ಲೆ ಯತ್ನ

ಕರ್ತವ್ಯನಿರತ ವೈದ್ಯರೊಬ್ಬರ ಶರ್ಟ್ ಹರಿದು ಹಲ್ಲೆ; ಘಟನೆಯಲ್ಲಿ ಮಹಿಳಾ ಸಿಬ್ಬಂದಿಗೂ ಹಲ್ಲೆ ಯತ್ನ

spot_img
- Advertisement -
- Advertisement -

ಚಿಕ್ಕಮಗಳೂರು: ಇಲ್ಲಿನ ಕಳಸ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯನಿರತ ವೈದ್ಯರೊಬ್ಬರ ಶರ್ಟ್ ಹರಿದು ಹಲ್ಲೆ ನಡೆಸಿರುವ ಘಟನೆ ಜ.20 ಸೋಮವಾರಂದು ನಡೆದಿದೆ.

ಹಲ್ಲೆಗೊಳಾಗದ ವೈದ್ಯನನ್ನು ಡಾ.ಮುರುಳಿ ಎನ್ನಲಾಗಿದೆ.

ವೈದ್ಯ ಮುರಳಿಯವರು ಮರದಿಂದ ಬಿದ್ದಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿದ್ದ ಸಂದರ್ಭದಲ್ಲಿ ಧರಣೇಂದ್ರ ಜೈನ್, ಸುರೇಶ್, ಸುಹಾನ್ ಎಂಬವರು ಬಂದು ಏಕಾಏಕಿ ಹಲ್ಲೆ ನಡೆಸಿದ್ದಾರೆ. ವೈದ್ಯರ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಕಂಡ ಮಹಿಳಾ ಸಿಬ್ಬಂದಿ ತಡೆಯಲು ಬಂದಿದ್ದು, ಈ ಸಂದರ್ಭದಲ್ಲ ಮಹಿಳಾ ಸಿಬ್ಬಂದಿ ಮೇಲೂ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಕಳಸ ಪೊಲೀಸ್ ಠಾಣೆಯಲ್ಲಿ ವೈದ್ಯರು ಘಟನೆ ಸಂಬಂಧ ಹಲ್ಲೆ ನಡೆಸಿದ ಮೂವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರು, ಪೊಲೀಸರು ಆರೋಪಿಗಳ ಬಂಧನಕ್ಕೆ ಮೀನಮೇಷ ಎಣಿಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಹಲ್ಲೆ ಮಾಡಿದವರು ಕಾಂಗ್ರೆಸ್ ಕಾರ್ಯಕರ್ತರಾಗಿದ್ದು, ನಾಯಕರ ಒತ್ತಡದಿಂದ ಅವರ ಬಂಧನವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಇನ್ನು ಇದರಿಂದಾಗಿ ನೊಂದಿರುವ ವೈದ್ಯರು ತಾನು ತನ್ನ ಕೆಲಸಕ್ಕೆ ರಾಜೀನಾಮೆ ನೀಡುವುದಾಗಿ ಡಾ. ಮುರಳಿ ಹೇಳಿಕೆ ನೀಡಿದ್ದಾರೆ. ಕಳೆದ ತಿಂಗಳುಗಳಿಂದ ಆಸ್ಪತ್ರೆಗೆ ವೈದ್ಯರೆ ಇಲ್ಲದಿದ್ದು, ಪ್ರಸ್ತುತ ಮುರುಳಿ ಅವರ ವೈದ್ಯರಾಗಿ ನೇಮಕಗೊಂಡಿದ್ದು, ಇದೀಗ ಇವರ ಈ ಹೇಳಿಕೆಯಿಂದ ಮುಂದಿನ ದಿನಗಳಲ್ಲಿ ಚಿಕಿತ್ಸೆ ನೀಡುವವರು ಯಾರೆಂದು ಸ್ಥಳೀಯರು ಕಂಗಾಲಾಗಿದ್ದಾರೆ.

- Advertisement -
spot_img

Latest News

error: Content is protected !!