Saturday, May 18, 2024
Homeತಾಜಾ ಸುದ್ದಿಬೆಳ್ತಂಗಡಿ: ಮುಂಡಾಜೆ ಶಾರದಾ ನಗರದಲ್ಲಿ ಶಿಥಿಲಗೊಂಡ ರಸ್ತೆ ವಿಚಾರ: ಅವಾಚ್ಯ ಶಬ್ದಗಳಿಂದ ನಿಂದಿಸಿದ ಗ್ರಾ.ಪಂ.ಸದಸ್ಯ: ಗ್ರಾಮಸ್ಥರು...

ಬೆಳ್ತಂಗಡಿ: ಮುಂಡಾಜೆ ಶಾರದಾ ನಗರದಲ್ಲಿ ಶಿಥಿಲಗೊಂಡ ರಸ್ತೆ ವಿಚಾರ: ಅವಾಚ್ಯ ಶಬ್ದಗಳಿಂದ ನಿಂದಿಸಿದ ಗ್ರಾ.ಪಂ.ಸದಸ್ಯ: ಗ್ರಾಮಸ್ಥರು ಹಾಗೂ ಗ್ರಾ.ಪಂ.ಸದಸ್ಯರ ನಡುವೆ ಜಟಾಪಟಿ

spot_img
- Advertisement -
- Advertisement -

ಬೆಳ್ತಂಗಡಿ:ಮುಂಡಾಜೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮುಂಡ್ರುಪಾಡಿ ಶಾರದಾ ನಗರದಲ್ಲಿ ಸಾರ್ವಜನಿಕ ರಸ್ತೆಯೊಂದಿದ್ದು. ಇದೀಗ ಆ ರಸ್ತೆಯ ಬಳಿಯಲ್ಲಿರುವ ರಬ್ಬರ್‌ ಗಿಡವನ್ನು ಕಡಿದು ಸಾಗಿಸುತ್ತಿರುವ ಕಾರಣ ರಸ್ತೆ ಶಿಥಿಲಗೊಂಡಿದೆ.

ಈ ಕಾರಣ ಇಲ್ಲಿನ ಗ್ರಾಮಸ್ಥರು ಪಂಚಾಯತ್‌ ಮೊರೆ ಹೋಗಿದ್ದು ಅಲ್ಲಿ ಸರಿಯಾಗಿ ಸ್ಪಂದನೆ ದೊರಕಿಲ್ಲ. ಹಾಗಾಗಿ ಇಂದು ಗ್ರಾಮಸ್ಥರು ಪೊಲೀಸ್‌ ಹಾಗೂ ಮಾಧ್ಯಮದ ಮೊರೆ ಹೋಗಿದ್ದಾರೆ.

ತಕ್ಷಣ ಸ್ಥಳಕ್ಕಾಗಮಿಸಿದ ಮೊಂಡಾಜೆ ಪಿಡಿಓ ಹಾಗೂ ಪಂಚಾಯತ್‌ ಸದಸ್ಯರು ಸ್ಥಳಕ್ಕೆ ಬಂದಿದ್ದಾರೆ. ಈ ಸಂದರ್ಭ ಗ್ರಾಮ ಪಂಚಾಯತ್‌ ಸದಸ್ಯರ ಪೈಕಿ ವಿಶ್ವನಾಥ್‌ ಶೆಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ.  

ಈ ವೇಳೆ ಗ್ರಾಮಸ್ಥರು ಹಾಗೂ ಸದಸ್ಯರುಗಳ ನಡುವೆ ಜಟಾಪಟಿ ನಡೆದಿದೆ.

- Advertisement -
spot_img

Latest News

error: Content is protected !!