- Advertisement -
- Advertisement -
ಬೆಳ್ತಂಗಡಿ:ಮುಂಡಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಂಡ್ರುಪಾಡಿ ಶಾರದಾ ನಗರದಲ್ಲಿ ಸಾರ್ವಜನಿಕ ರಸ್ತೆಯೊಂದಿದ್ದು. ಇದೀಗ ಆ ರಸ್ತೆಯ ಬಳಿಯಲ್ಲಿರುವ ರಬ್ಬರ್ ಗಿಡವನ್ನು ಕಡಿದು ಸಾಗಿಸುತ್ತಿರುವ ಕಾರಣ ರಸ್ತೆ ಶಿಥಿಲಗೊಂಡಿದೆ.
ಈ ಕಾರಣ ಇಲ್ಲಿನ ಗ್ರಾಮಸ್ಥರು ಪಂಚಾಯತ್ ಮೊರೆ ಹೋಗಿದ್ದು ಅಲ್ಲಿ ಸರಿಯಾಗಿ ಸ್ಪಂದನೆ ದೊರಕಿಲ್ಲ. ಹಾಗಾಗಿ ಇಂದು ಗ್ರಾಮಸ್ಥರು ಪೊಲೀಸ್ ಹಾಗೂ ಮಾಧ್ಯಮದ ಮೊರೆ ಹೋಗಿದ್ದಾರೆ.
ತಕ್ಷಣ ಸ್ಥಳಕ್ಕಾಗಮಿಸಿದ ಮೊಂಡಾಜೆ ಪಿಡಿಓ ಹಾಗೂ ಪಂಚಾಯತ್ ಸದಸ್ಯರು ಸ್ಥಳಕ್ಕೆ ಬಂದಿದ್ದಾರೆ. ಈ ಸಂದರ್ಭ ಗ್ರಾಮ ಪಂಚಾಯತ್ ಸದಸ್ಯರ ಪೈಕಿ ವಿಶ್ವನಾಥ್ ಶೆಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ.
ಈ ವೇಳೆ ಗ್ರಾಮಸ್ಥರು ಹಾಗೂ ಸದಸ್ಯರುಗಳ ನಡುವೆ ಜಟಾಪಟಿ ನಡೆದಿದೆ.
- Advertisement -