Friday, June 27, 2025
HomeUncategorizedಮಂಗಳೂರು:ಸಿಟಿ ಬಸ್ ಮೇಲೆ ಬಿದ್ದ ತೆಂಗಿನ ಮರ!

ಮಂಗಳೂರು:ಸಿಟಿ ಬಸ್ ಮೇಲೆ ಬಿದ್ದ ತೆಂಗಿನ ಮರ!

spot_img
- Advertisement -
- Advertisement -

ಮಂಗಳೂರು : ನಗರದ ಮಲ್ಲಿಕಟ್ಟೆಯ ಸರ್ಕಲ್‌ನಲ್ಲಿ ಸಿಟಿ ಬಸ್ ಮೇಲೆ ತೆಂಗಿನಮರ ಬಿದ್ದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.

ಸದ್ಯ ಘಟನೆಯಲ್ಲಿ ಪ್ರಯಾಣಿಕರೆಲ್ಲರೂ ಅಪಾಯದಿಂದ ಪಾರಾಗಿದ್ದು, ಮಂಗಳವಾರ ಬೆಳಗ್ಗೆ ಸುಮಾರು ಹತ್ತು ಗಂಟೆ ವೇಳೆಗೆ ಚಲಿಸುತ್ತಿದ್ದ 15 ನಂಬರ್ ನ ಸಿಟಿ ಬಸ್ ಮೇಲೆ ಬಿದ್ದಿದೆ. ತೆಂಗಿನ ಮರ ಬಸ್ ನ ಹಿಂಬದಿಗೆ ಬಿದ್ದ ಕಾರಣ ಸಂಭವನೀಯ ಅಪಾಯ ತಪ್ಪಿದೆ.

ಸ್ಥಳಕ್ಕೆ ಮಾಜಿ ಎಮ್.ಎಲ್.ಸಿ ಐವನ್ ಡಿಸೋಜ್ ಅವರು ಹಾಗು ಮಾಜಿಮೇಯರ್ ಶಶಿಧರ ಹೆಗ್ಡೆಯವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸಾರ್ವಕನಿಕರ ಸಹಕಾರದಲ್ಲಿ ಸಂಚಾರ ಪೊಲೀಸರು ಬಿದ್ದಿದ್ದ ತೆಂಗಿನಮರ ತೆರವು ಕಾರ್ಯಾಚರಣೆ ಮಾಡಿದರು.

- Advertisement -
spot_img

Latest News

error: Content is protected !!