ಕುಂದಾಪುರ/ಬೈಂದೂರು: ಒತ್ತಿನೆಣೆ ಸಮೀಪದ ಹೇನ್ ಬೇರಿನ ನಿರ್ಜನ ಪ್ರದೇಶದಲ್ಲಿ ಕಾರಿನಲ್ಲಿ ಜೀವಂತವಾಗಿ ಕಾರ್ಕಳದ ಆನಂದ ದೇವಾಡಿಗ (60) ಅವರನ್ನು ಸುಟ್ಟು ಹಾಕಿದ ಪ್ರಕಣಕ್ಕೆ ಸಂಬಂಧಿಸಿದಂತೆ ಒಂದೊಂದೇ ಸಂಗತಿಗಳು ಹೊರಬರುತ್ತಿವೆ. ಕೃತ್ಯಕ್ಕೆ ಸಹಕರಿಸಿದ ಆರೋಪದಲ್ಲಿ ಬಂಧಿತ ಸಹೋದರರಾಗಿರುವ ಸತೀಶ್ ಹಾಗೂ ನಿತಿನ್ ಹಣದಾಸೆಗಾಗಿ ಸಹಕರಿಸಿದರೇ ಎನ್ನುವ ಅನುಮಾನ ಹುಟ್ಟಿಕೊಂಡಿದೆ.
ಪ್ರಮುಖ ಆರೋಪಿ ಸದಾನಂದ ಶೇರೆಗಾರ್ ಹೆಣೆದ ಕೊಲೆ ಯೋಜನೆ ಪ್ರಕಾರ ಆತ ಕಾರಿನಲ್ಲಿ ಸಾವನ್ನಪ್ಪಿದ್ದು, ಅದಾದ ಬಳಿಕ ಆತನ ಹೆಸರಲ್ಲಿರುವ ಎಲ್ಐಸಿ ವಿಮೆ ಮೂಲಕ ಸಿಗುವ ಹಣವನ್ನು ಸದಾನಂದ, ಶಿಲ್ಪಾ ಜತೆಗೆ ಈ ಕೃತ್ಯಕ್ಕೆ ಸಹಕರಿಸಿದ ನಿತಿನ್ ಹಾಗೂ ಸತೀಶ್ ಹಂಚಿಕೊಳ್ಳಲು ನಿರ್ಧರಿಸಿದ್ದರು. ಎನ್ನುವುದು ಮೂಲಗಳಿಂದ ತಿಳಿದುಬಂದಿದೆ.
ಈ ಯೋಜನೆಯು ಮಲಯಾಳಿ “ಕುರುಪ್ ಸಿನೆಮಾದಂತೆಯೇ ರೂಪುಗೊಂಡಂತಿದೆ. ಹಣದಾಸೆಗಾಗಿಯೇ ಅವರು ಈ ಕೃತ್ಯಕ್ಕೆ ಸಹಕರಿಸಿದ್ದರು ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿ ದಿನಕ್ಕೊಂದು ರೋಚಕ ಸಂಗತಿಗಳು ಹೊರ ಬರುತ್ತಿದ್ದು, ಪೊಲೀಸ್ ತನಿಖೆಯಿಂದಷ್ಟೇ ಸತ್ಯಾಂಶ ಹೊರಬಹುದು.