ಕೋಲಾರ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಿದರೆ ಹಾಕಿದ್ರೆ ಉಚಿತ ಹೇರ್ ಕಟ್ಟಿಂಗ್ ಮಾಡುವ ಆಫರ್ ನೀಡಲಾಗಿದೆ.
ಮಾಲೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯ ಬೆಂಬಲಿಗರಿಂದ ಚುನಾವಣೆಯಲ್ಲಿ ಗೆಲುವಿಗಾಗಿ ವಿಭಿನ್ನ ಪ್ರಯತ್ನ ನಡೆದಿದೆ.
ಮಾಲೂರು ಜೆಡಿಎಸ್ ಅಭ್ಯರ್ಥಿ ಜಿ.ಇ. ರಾಮೇಗೌಡರಿಗೆ ವೋಟ್ ಹಾಕಿದರೆ ಮಾಲೂರು ತಾಲೂಕಿನ ಕುಡಿಯನೂರು ಗ್ರಾಮದಲ್ಲಿ ಉಚಿತ ಕಟ್ಟಿಂಗ್ ಮಾಡುವುದಾಗಿ ಕ್ಷೌರಿಕ ರಾಜೇಶ್ ಎಂಬವರು ಘೋಷಿಸಿದ್ದಾರೆ.
ಮಾಜಿ ಸೈನಿಕರು, ವೃದ್ಧರು ಜೊತೆಗೆ ಜೆಡಿಎಸ್ ಪಕ್ಷಕ್ಕೆ ವೋಟ್ ಹಾಕುವವರಿಗೆ ಉಚಿತ ಕ್ಷೌರ ಮಾಡುವುದಾಗಿ ಹೇಳಿದ್ದಾರೆ.
ಕುಡಿಯನೂರು ಗ್ರಾಮದ ಸವಿತ ಸಮಾಜದ ರಾಜೇಶ್ ಎಂಬುವರಿಗೆ ಜೆಡಿಎಸ್ ಮುಖಂಡ ರಾಮೇಗೌಡ ಉಚಿತವಾಗಿ ಅಂಗಡಿ ಮಾಡಿಕೊಟ್ಟಿದ್ದರು.
ತಮ್ಮ ಅಂಗಡಿಯಲ್ಲಿ ಅಂಗಡಿಯಲ್ಲಿ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಅಭ್ಯರ್ಥಿ ರಾಮೇಗೌಡ ಚಿತ್ರ ಅಳವಡಿಸಿ ಗೋಡೆಗಳ ಮೇಲೆ ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷದ ಸಾಧನೆಗಳ ಪಟ್ಟಿ ಬರೆಸಿ
ಅಂಗಡಿಗೆ ಬರುವವರಿಗೆ ಜೆಡಿಎಸ್ ಪಕ್ಷದ ಬಗ್ಗೆ ಪ್ರಚಾರ ಮಾಡಲು ವಿಭಿನ್ನ ಪ್ರಯತ್ನ ನಡೆಸಿದ್ದಾರೆ.