Sunday, June 7, 2026
Homeತಾಜಾ ಸುದ್ದಿಪುತ್ತೂರು: ಸತ್ಯ ವಿಚಾರ ಸಮಾಜದ ಮುಂದೆ ತಿಳಿಸಿದ್ದಕ್ಕೆ ಬಿಜೆಪಿಯಿಂದ ಪೊಲೀಸ್ ಕೇಸ್: ಕಾಂಗ್ರೆಸ್ ವಕ್ತಾರ ಅಮಳ...

ಪುತ್ತೂರು: ಸತ್ಯ ವಿಚಾರ ಸಮಾಜದ ಮುಂದೆ ತಿಳಿಸಿದ್ದಕ್ಕೆ ಬಿಜೆಪಿಯಿಂದ ಪೊಲೀಸ್ ಕೇಸ್: ಕಾಂಗ್ರೆಸ್ ವಕ್ತಾರ ಅಮಳ ರಾಮಚಂದ್ರ ಆರೋಪ

- Advertisement -
- Advertisement -

ಪುತ್ತೂರು:  ಪುತ್ತೂರು ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಜನತೆಯ ಮುಂದೆ ತಿಳಿಸಿದ ನನ್ನ ಮೇಲೆ ಶಾಸಕರು ಪೊಲೀಸ್ ಕೇಸು‌ ಹಾಕಿಸುವ ಮೂಲಕ ವಿರೋಧ ಪಕ್ಷದ ಧ್ವನಿಯನ್ನು ಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ವಕ್ತಾರ ಅಮಳ ರಾಮಚಂದ್ರ ಆರೋಪಿಸಿದ್ದಾರೆ.

ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪುತ್ತೂರು ಕಂದಾಯ ಇಲಾಖೆಯಲ್ಲಿ ಹಣ ನೀಡದೆ ಯಾವುದೇ ಕೆಲಸ ನಡೆಯುತ್ತಿಲ್ಲ. ಸ್ವತಃ ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಈ ವಿಚಾರವನ್ನು‌ ಕೆ.ಡಿ.ಪಿ ಸಭೆಯಲ್ಲಿ ಎತ್ತಿದ್ದು, ಭ್ರಷ್ಟ ಅಧಿಕಾರಿಗಳಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.

ಇದೇ ವಿಚಾರಕ್ಕೆ‌ ಸಂಬಂಧಪಟ್ಟಂತೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಭ್ರಷ್ಟಾಚಾರದ ವಿಚಾರದಲ್ಲಿ ಶಾಸಕರ ಮೌನವನ್ನು ಪ್ರಶ್ನಿಸಿದೆ. ಸರ್ಕಾರಿ ಕಚೇರಿಯ ಭ್ರಷ್ಟಾಚಾರದಲ್ಲಿ ಶಾಸಕರಿಗೂ, ಬಿಜೆಪಿ ಕಚೇರಿಗೂ ಪಾಲಿದೆ ಎನ್ನುವ ಹೇಳಿಕೆಗೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದವರ ಮೇಲೆ ಪೊಲೀಸ್ ಕೇಸು ದಾಖಲಿಸಿದ್ದಾರೆ. ಆದರೆ ಭ್ರಷ್ಟಾಚಾರದ ಆರೋಪದ ಬಗ್ಗೆ ಶಾಸಕರು ಚಕಾರವೆತ್ತದಿರುವುದು ವಿಪರ್ಯಾಸ ಎಂದು ಆರೋಪಿಸಿದರು.

- Advertisement -

Latest News

error: Content is protected !!