- Advertisement -
- Advertisement -
ಚಾರ್ಮಾಡಿ: ಹೃದಯಾಘಾತದಿಂದ ಬಸ್ ನಿರ್ವಾಹಕರೊಬ್ಬರು ಮೃತಪಟ್ಟಿರುವ ಘಟನೆ ಚಾರ್ಮಾಡಿ ಘಾಟ್ನ ಮಲಯಮಾರುತ ಸಮೀಪ ಇಂದು ಬೆಳಗ್ಗೆ ನಡೆದಿದೆ. ಮೃತ ನಿರ್ವಾಹಕರನ್ನು ವಿಜಯ್ (43) ಎಂದು ಗುರುತಿಸಲಾಗಿದೆ.
ಚಿಕ್ಕಮಗಳೂರಿನಿಂದ ಉಡುಪಿಗೆ ಹೋಗುತ್ತಿದ್ದ ಬಸ್ನಲ್ಲಿದ್ದ ನಿರ್ವಾಹಕ ವಿಜಯ್ ಅವರಿಗೆ ಬೆಳಗ್ಗೆ 8.30ಕ್ಕೆ ಹೃದಯಾಘಾತ ಸಂಭವಿಸಿದೆ. ಈ ವೇಳೆ ಅವರನ್ನು ಬಣಕಲ್ ಸಮಾಜ ಸೇವಕ ಆರಿಫ್ ಅವರ ಆಂಬ್ಯುಲೆನ್ಸ್ನಲ್ಲಿ ಬಣಕಲ್ ಆಸ್ಪತ್ರೆಗೆ ಕೊಂಡೊಯ್ದಿದ್ದು, ಪ್ರಥಮ ಚಿಕಿತ್ಸೆ ಮಾಡಿ ಬಳಿಕ ಮೂಡಿಗೆರೆಯ ಎಂಜಿಎಂ ಆಸ್ಪತ್ರೆಗೆ ರವಾನಿಸಲಾಯಿತು. ಮೂಡಿಗೆರೆ ಆಸ್ಪತ್ರೆಯಲ್ಲಿ ನಿರ್ವಾಹಕ ವಿಜಯ್ ಮೃತಪಟ್ಟಿದ್ದಾರೆ.
- Advertisement -