Thursday, June 4, 2026
Homeಕರಾವಳಿಬೆಳ್ತಂಗಡಿ : ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಿಂಚನಾ ಎಂ.ಡಿ ಪ್ರಥಮ ಸ್ಥಾನ!

ಬೆಳ್ತಂಗಡಿ : ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಿಂಚನಾ ಎಂ.ಡಿ ಪ್ರಥಮ ಸ್ಥಾನ!

- Advertisement -
- Advertisement -

ಬೆಳ್ತಂಗಡಿ : ಗದಗ ಜಿಲ್ಲಾ ಇಂಡೋರ್ ಕ್ರೀಡಾಂಗಣದಲ್ಲಿ ಸೆ.25 ರಂದು ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯ ಅಂಡರ್ 21 ವಿಭಾಗದಲ್ಲಿ ಬೆಳ್ತಂಗಡಿ ಯಮಟೋ ಶೊಟೋಕಾನ್ ಕರಾಟೆ ಇದರ ಸದಸ್ಯೆ ಸಿಂಚನಾ ಎಂ.ಡಿ. ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಮುಖ್ಯ ಗುರುಗಳಾದ ಶಾಜು ಮುಲಾವನ, ಬೆಳ್ತಂಗಡಿ ಶಾಖೆಯ ಅಶೋಕ್ ಆಚಾರ್ಯ ಮತ್ತು ಮಿಥುನ್ ಇವರಿಂದ ತರಬೇತಿ ಪಡೆಯುತ್ತಿದ್ದು, ಇವರು ಮಂಗಳೂರು ಕರಾವಳಿ ಕಾವಲು ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ದುರ್ಗಾದಾಸ್ ಮತ್ತು ರೇವತಿ ದಂಪತಿಗಳ ಪುತ್ರಿಯಾಗಿದ್ದು, ಬೆಳ್ತಂಗಡಿ ವಾಣಿ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದಾಳೆ.

- Advertisement -

Latest News

error: Content is protected !!