- Advertisement -
- Advertisement -
ಬೆಳ್ತಂಗಡಿ: ರಾಜ್ಯ ಮಲೆಕುಡಿಯ ಸಂಘದ ಮಹಾಸಭೆಯ ಪೂರ್ವ ಸಿದ್ಧತಾ ಸಭೆಯು ರಾಜ್ಯಾಧ್ಯಕ್ಷ ಅಣ್ಣಪ್ಪ ಎನ್ ಇವರ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿ ಕೊಯ್ಯುರು ಶಿವಗಿರಿ ಮಲೆಕುಡಿಯ ಸಮುದಾಯ ಭವನದಲ್ಲಿ ಇಂದು ಜರಗಿತು.
ಈ ಸಭೆಯಲ್ಲಿ ಬೈಲಾ ರಚನಾ ಸಭೆ ನಡೆಸುವ ಬಗ್ಗೆ ವರ್ಷದ ಡಿಸೆಂಬರ್ ಅಂತ್ಯದೊಳಗೆ ಮಹಾಸಭೆ ಆಯೋಜಿಸುವುದು, ಜಾತಿ ಪ್ರಮಾಣದಲ್ಲಿ ನಮೂದಿಸಿರುವ ಜಾತಿಯ ಕುರಿತು ಇರುವ ಗೊಂದಲ ನಿವಾರಣೆ ಕುರಿತಾಗಿ ಚರ್ಚಿಸಲಾಯಿತು.
ರಾಜ್ಯದ ಸಂಘ ಪದಾಧಿಕಾರಿಗಳು, ಜಿಲ್ಲಾ ಸಂಘದ ಪದಾಧಿಕಾರಿಗಳು, ಬೆಳ್ತಂಗಡಿ ತಾಲೂಕು ಸಮಿತಿಯ ಪದಾಧಿಕಾರಿಗಳು ಉಪಸ್ಥಿತಿದ್ದರು.
ರಾಜ್ಯ ಮಲೆಕುಡಿಯ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಗೌಡ ಈದು ಇವರು ಸ್ವಾಗತಿಸಿ, ಪ್ರಸ್ತಾಪಿಸಿದರು. ದ.ಕ ಮಲೆಕುಡಿಯ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ಉಜಿರೆ ವಂದಿಸಿದರು.
ವರದಿ:ಗಂಗಾಧರ
- Advertisement -