- Advertisement -


- Advertisement -
ಮಂಗಳೂರು: ಮುಡಿಪು ಸಮೀಪದ ಕಾಯೆರ್ ಗೋಳಿಯಲ್ಲಿ 76 ವರ್ಷದ ಭವಾನಿ ಆಚಾರ್ಯ ಎಂಬ ವೃದ್ಧೆಯ ಮೇಲೆ ಹಲ್ಲೆ ನಡೆಸಿ, ಕೈಕಾಲು ಕಟ್ಟಿ ₹3 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.ಬೊಕ್ಕಪಟ್ಟಣದ ಬಾಲಸುಬ್ರಹ್ಮಣ್ಯಂ (49) ಮತ್ತು ಮಣ್ಣಗುಡ್ಡದ ಶ್ಯಾಮ್ ಕುಮಾರ್ (33) ಬಂಧಿತರು.
ಆಗಸ್ಟ್ 3ರಂದು ಮನೆ ಬಾಡಿಗೆ ನೆಪದಲ್ಲಿ ಬಂದಿದ್ದ ಆರೋಪಿಗಳು, ಒಂಟಿಯಾಗಿದ್ದ ವೃದ್ಧೆಯ ಬಾಯಿಗೆ ಬಟ್ಟೆ ತುರುಕಿ 24 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಆರೋಪಿಗಳು ಕೆಲವು ದಿನಗಳ ಹಿಂದೆ ಹಲಸಿನ ಹಣ್ಣು ಕೊಳ್ಳುವ ನೆಪದಲ್ಲಿ ಬಂದು ಸ್ಕೆಚ್ ಹಾಕಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಬಂಧಿತರಿಂದ ಸಂಪೂರ್ಣ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಳ್ಳಲಾಗಿದೆ. ಮುಖ್ಯ ಆರೋಪಿ ಬಾಲಸುಬ್ರಹ್ಮಣ್ಯಂ ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಳೆ ಅಪರಾಧಿಯಾಗಿದ್ದಾನೆ.
- Advertisement -


