Saturday, June 13, 2026
Homeಕರಾವಳಿಮೀನುಗಾರಿಕಾ ಬಂದರು ಬಳಿಯ ನದಿಯಲ್ಲಿ ಶವವೊಂದು ಪತ್ತೆ

ಮೀನುಗಾರಿಕಾ ಬಂದರು ಬಳಿಯ ನದಿಯಲ್ಲಿ ಶವವೊಂದು ಪತ್ತೆ

- Advertisement -
- Advertisement -

ಮಂಗಳೂರು: ಇಲ್ಲಿನ ಮೀನುಗಾರಿಕಾ ಬಂದರು ಬಳಿಯ ನದಿಯಲ್ಲಿ ಶವವೊಂದು ಪತ್ತೆಯಾಗಿದ್ದು, ವ್ಯಕ್ತಿಯನ್ನು ಕೊಲೆ ಮಾಡಿ ನದಿಗೆ ಎಸೆದಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಕೊಲೆಯಾದ ವ್ಯಕ್ತಿಯನ್ನು ನಾಸೀರ್ ಯಾನೆ ದಕ್ಕೆ ನಾಸಿರ್ ಎನ್ನಲಾಗಿದೆ.

ಈ ವ್ಯಕ್ತಿಯು ಹಲವಾರು ಕಳ್ಳತನ ಮತ್ತು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಯಾಗಿದ್ದಾನೆ.  ಇನ್ನು ಮೃತದೇಹದ ಹಣೆ ಹಾಗೂ ದೇಹದ ಮೇಲೆ ಗಾಯಗಳ ಗುರುತು ಪತ್ತೆಯಾಗಿದ್ದು, ದುಷ್ಕರ್ಮಿಗಳು ಕೊಲೆ ಮಾಡಿ ಮೃತದೇಹವನ್ನು ನದಿಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ಪಾಂಡೇಶ್ವರ ಠಾಣೆಯ ಪೊಲೀಸರು ಧಾವಿಸಿ ಪರಿಶೀಲನೆ ನಡೆಸುತ್ತಿದ್ದು,  

ತನಿಖೆಯನ್ನು ಆರಂಭಿಸಿದ್ದಾರೆ.   

- Advertisement -

Latest News

error: Content is protected !!