- Advertisement -
![]()
- Advertisement -
ಬೆಳ್ತಂಗಡಿ: ಸವಣಾಲಿನ ಮಂಜದಬೆಟ್ಟು ಪಿಲ್ಚಂಡಿ ಗುಡ್ಡೆಯ ಶ್ರೀ ಪಿಲಿಚಾಮುಂಡಿ ಮತ್ತು ಕೊಡಮಣಿತ್ತಾಯ ದೈವ ಕ್ಷೇತ್ರದಲ್ಲಿ ತೀರ್ಥ ಬಾವಿಯ ಮೂಹೂರ್ತ ಕಾರ್ಯವು ದಿನಾಂಕ: 16 / 01 / 2026 ಶುಕ್ರವಾರದಂದು ಬೆಳಗ್ಗೆ 9 : 00 ಗಂಟೆಯಿಂದ ಬೆಳಿಗ್ಗೆ 10 : 30 ರ ಶುಭ ಘಳಿಗೆಯಲ್ಲಿ ಪಿಲ್ಚಂಡಿ ಗುಡ್ಡೆ, ಮಂಜದಬೆಟ್ಟು ಇಲ್ಲಿ ನೆರವೇರಿತು.
ಈ ಪೂಜಾ ವಿಧಿವಿಧಾನಗಳನ್ನು ನಮ್ಮ ಗ್ರಾಮದ ಅಸ್ರನ್ನರಾದ ಗುತ್ತಿನಬೈಲು ವೇದಮೂರ್ತಿ ಶ್ರೀ ವಿಷ್ಟು ಮೂರ್ತಿ ಭಟ್ ಅವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಗುತ್ತು ಬರ್ಕೆ ಹಾಗೂ ಜಾತ್ರಾ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು. ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಕೊಡುಗೈ ದಾನಿ ಮುಂಬೈ ಉದ್ಯಮಿ ದಿವಗಂತ ಭೋಜ ಶೆಟ್ಟಿ ಅವರ ಪತ್ನಿ ಶ್ರೀಮತಿ ವಸಂತಿ ಬಿ ಶೆಟ್ಟಿ ತುಂಗಾ ಹಾಸ್ಪಿಟಲ್ ಮುಂಬೈ ಇವರು ಉಪಸ್ಥಿತರಿದ್ದರು.

- Advertisement -


