- Advertisement -
![]()
- Advertisement -
ನವದೆಹಲಿ: ರಾಹುಕೇತು ಹಿಂದಿ ಸಿನಿಮಾದಲ್ಲಿ ಕನ್ನಡ ಚಲನಚಿತ್ರ ಕಾಂತಾರದಲ್ಲಿದ್ದ ದೈವದ ಕೂಗಿನ ಅನುಕರಣೆಗೆ ಸೆನ್ಸಾರ್ ಮಂಡಳಿ ಬ್ರೇಕ್ ಹಾಕಿದೆ.
ಪುಲ್ಕಿತ್ ಸಾಮ್ರಾಟ್ ಮತ್ತು ವರುಣ್ ಶರ್ಮಾ ಅಭಿನಯದ ರಾಹು ಕೇತು ಚಲನಚಿತ್ರದಲ್ಲಿ ಕಾಂತಾರ ಸಿನಿಮಾದಲ್ಲಿದ್ದ ದೈವದ ಕೂಗು ಅನ್ನು ಚಿತ್ರದಲ್ಲಿ ಬಳಸಲಾಗಿತ್ತು. ಈ ಶಬ್ದವನ್ನು ಬಳಸದಂತೆ ಸೆನ್ಸಾರ್ ಮಂಡಳಿ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಅಲ್ಲದೇ ಚಲನಚಿತ್ರದಲ್ಲಿ ಬಳಸಲಾದ ಸಂಸ್ಕೃತ ಶ್ಲೋಕಕ್ಕೆ ದೃಢೀಕರಣ ಪತ್ರ ಸಲ್ಲಿಸಲು ಸೂಚನೆ ನೀಡಲಾಗಿದ್ದು, ಎಲ್ಲಾ ಮದ್ಯದ ಬ್ರಾಂಡ್ ಗಳ ಹೆಸರುಗಳನ್ನು ತೆಗೆದು ಹಾಕಲು ಕೂಡಾ ನಿರ್ದೇಶನ ನೀಡಲಾಗಿದೆ.ಜನವರಿ 16 ರಂದು ರಾಹುಕೇತು ಸಿನಿಮಾ ಬಿಡುಗಡೆಯಾಗಲಿದೆ.
- Advertisement -


