- Advertisement -
![]()
- Advertisement -
ಮಂಗಳೂರಿನಲ್ಲಿ ರಾಜ್ಯ ಸರ್ಕಾರದಿಂದ ನಡೆದ ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶವು ಹೂಡಿಕೆದಾರರನ್ನು ಕರಾವಳಿಯತ್ತ ಆಕರ್ಷಿಸಲು ಸಹಕಾರಿಯಾಗಿದೆ.
ಯಾವುದೇ ರೀತಿಯ ಪಕ್ಷ ಭೇದವಿಲ್ಲದೇ ಸಮಾವೇಶದಲ್ಲಿ ಸಂಸದರು, ಶಾಸಕರು ಭಾಗವಹಿಸಿರುವುದು ಸ್ವಾಗತಾರ್ಹವಾಗಿದ್ದು, ಈ ರೀತಿಯ ಅಭಿವೃದ್ಧಿಯ ನಡೆಯನ್ನ ರಾಜಕಾರಣಿಗಳೆಲ್ಲರೂ ತೋರಬೇಕೆಂದು ಬಿಲ್ಲವ ಮುಖಂಡ ಪದ್ಮರಾಜ್ ರಾಮಯ್ಯ ಅವರು ಹೇಳಿದರು,
ಜಿಲ್ಲೆಯ ಕೆಲವು ಬಿಜೆಪಿ ಶಾಸಕರು ತಮಗೆ ಅನುದಾನ ಸಿಗುತ್ತಿಲ್ಲ ಎಂಬ ಮಾತುಗಳನ್ನಾಡುತ್ತಿದ್ದಾರೆ. ಶಾಸಕರಿಗೆ ಅನುದಾನ ತೆಗೆದುಕೊಂಡು ಬರುವ ಚಾಕಚಕ್ಯತೆ ಇರಬೇಕು. ಅನುದಾನ ತರಲು ಆಗುತ್ತಿಲ್ಲ ಎಂದರೆ ರಾಜೀನಾಮೆ ನೀಡಿ. ಇಲ್ಲವಾದರೆ ಸಮಸ್ಯೆ, ಕುಂದುಕೊರತೆಗಳ ಬಗ್ಗೆ ಸಚಿವರಿಗೆ ಮನವರಿಕೆ ಮಾಡುವ ಕಾರ್ಯ ಮಾಡಿ ಎಂದರು.
- Advertisement -


