Monday, June 8, 2026
Homeಕರಾವಳಿಮಂಗಳೂರುಮಂಗಳೂರು;  ಸೈಬರ್ ಕ್ರೈಂ ಪೊಲೀಸ್  ಎಂದು ಬೆದರಿಸಿ ಹಣ ವರ್ಗಾಯಿಸುತ್ತಿಕೊಳ್ಳುತ್ತಿದ್ದ ಖತರ್ನಾಕ್ ಅಂದರ್

ಮಂಗಳೂರು;  ಸೈಬರ್ ಕ್ರೈಂ ಪೊಲೀಸ್  ಎಂದು ಬೆದರಿಸಿ ಹಣ ವರ್ಗಾಯಿಸುತ್ತಿಕೊಳ್ಳುತ್ತಿದ್ದ ಖತರ್ನಾಕ್ ಅಂದರ್

- Advertisement -
- Advertisement -

ಮಂಗಳೂರು;  ಸೈಬರ್ ಕ್ರೈಂ ಪೊಲೀಸ್  ಎಂದು ಬೆದರಿಸಿ ಹಣ ವರ್ಗಾಯಿಸುತ್ತಿಕೊಳ್ಳುತ್ತಿದ್ದ ಖತರ್ನಾಕ್ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತುಮಕೂರು ಜಿಲ್ಲೆಯ ಕೋತಿತೋಪು ನಿವಾಸಿ ಅರುಣ್ ಟಿ(27) ಬಂಧಿತ ಆರೋಪಿ.  

  ಆರೋಪಿಯು  ಫೇಸ್ ಬುಕ್ ಖಾತೆ, ಕನ್ನಡ ಮಾಡೆಲ್ಸ್ , ಟ್ರೋಲ್  ಮಾಸ್ಟರ್ , ಟ್ರೋಲ್ ಬಸ್ಯಾ ಇತ್ಯಾದಿ ಪೇಜ್ ಗಳಲ್ಲಿ ಕಮೆಂಟ್ಸ್ ಹಾಕಿರುವ ವ್ಯಕ್ತಿಗಳಿಗೆ ಕರೆಮಾಡಿ  ಸೈಬರ್ ಕ್ರೈಂ ಪೊಲೀಸ್ ಬೆಂಗಳೂರು ಸುಶೀಲ್ ಕುಮಾರ ಎಂದು ಹೇಳಿ  ತನ್ನನ್ನು ಪರಿಚಯಿಸಿಕೊಂಡು  ನಿಮ್ಮ ಮೇಲೆ ದೂರುಗಳು ಬಂದಿದೆ ನಿಮ್ಮನ್ನು ಅರೆಸ್ಟ ಮಾಡುತ್ತೇನೆ ಎಂದು ಹೆದರಿಸಿ  ಸಾರ್ವಜನಿಕರಿಂದ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದು  ಅದರಂತೆ  ಈ ಮೇಲಿನ ಪ್ರಕರಣದ ದೂರುದಾರರಿಗೆ ಹೆದರಿಸಿ ಒಟ್ಟು 1,23,000 ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ ಎನ್ನಲಾಗಿದೆ.      ಆರೋಪಿತನ ಮೇಲೆ ಸೈಬರ್ ಪೊರ್ಟಲ್ ನಲ್ಲಿ  ಒಟ್ಟು  11  ದೂರುಗಳು ದಾಖಲಾಗಿರುತ್ತವೆ

   ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಬಗ್ಗೆ ತನಿಖೆ ನಡೆಸಿ ಮಾಹಿತಿ ಕಲೆ ಹಾಕಿ ಆರೋಪಿತನನ್ನು ತುಮಕೂರಿನಲ್ಲಿ ಬಂಧಿಸಿ ಈ ದಿನ ನ್ಯಾಯಾಲಯದ ಮುಂದೆ ಹಾಜರಿಪಡಿಸಿದ್ದು ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

- Advertisement -

Latest News

error: Content is protected !!