- Advertisement -
- Advertisement -
ಬಂಟ್ವಾಳ: ದಿವಂಗತ ಅರುಣ್ ಬೋರುಗುಡ್ಡೆಯವರ ಮನೆಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಭೇಟಿ ನೀಡಿದರು.
ಕಬಕದಲ್ಲಿ ಸರಕಾರಿ ಬಸ್ ಚಾಲಕನ ಬೇಜವಾಬ್ದಾರಿಯಿಂದ ಮೊನ್ನೆ ನಡೆದ ಅಪಘಾತದಲ್ಲಿ ದಿವಂಗತ ಅರುಣ್ ಬೋರುಗುಡ್ಡೆ ಹಾಗೂ ಅವರ ಮಗ ಸಾವನ್ನಪ್ಪಿದ್ದರು.
ಇಂದು ಬಂಟ್ವಾಳ ತಾಲೂಕಿನ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅರುಣ್ ಅವರ ಮನೆಗೆ ಭೇಟಿ ನೀಡಿ ಮೃತರ ಪತ್ನಿ ಹಾಗೂ ತಾಯಿ ಮತ್ತು ಮಗನಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಅವರು ಅರುಣ್ ಬೋರುಗುಡ್ಡೆಯವರ ಮಗನ ಮುಂದಿನ ವಿದ್ಯಾಭ್ಯಾಸದ ಸಂಪೂರ್ಣ ಖರ್ಚನ್ನು ತಾನು ಭರಿಸುವುದಾಗಿ ತಿಳಿಸಿದರು ಮತ್ತು ಅಪಘಾತದಿಂದ ಸಿಗುವ ಪರಿಹಾರ ಧನವನ್ನು ಆದಷ್ಟು ಬೇಗ ನೀಡುವಂತೆ ಸಂಬಂಧಪಟ್ಟ ಇಲಾಖೆಗೆ ಫೋನ್ ಮಾಡಿ ತಿಳಿಸಿದರು
- Advertisement -