- Advertisement -
- Advertisement -
ಕಾಸರಗೋಡು: ಮೇಲಂತಸ್ತಿನಿಂದ ಆಕಸ್ಮಿಕವಾಗಿ ಜಾರಿ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಬಂದ್ಯೋಡು ಸಮೀಪದ ಚಿನ್ನಮೊಗರು ಎಂಬಲ್ಲಿ ನಡೆದಿದೆ.
ಜೋಡುಕಲ್ ನವೋದಯ ನಗರ ನಿವಾಸಿ ಜೆ.ಶಶಿಧರ (32) ಮೃತ ದುರ್ದೈವಿ. ಮನೆ ನಿರ್ಮಾಣ ಕೆಲಸ ನಿರ್ವಹಿಸುತ್ತಿದ್ದ ವೇಳೆ ಶಶಿಧರ ಮೇಲಂತಸ್ತಿನಿಂದ ಆಕಸ್ಮಿಕವಾಗಿ ಕೆಳಗೆ ಜಾರಿ ಬಿದ್ದು ತೀವ್ರ ಗಾಯಗೊಂಡಿದ್ದರೆನ್ನಲಾಗಿದೆ.
ಗಂಭೀರ ಗಾಯಗೊಂಡ ಶಶಿಧರರನ್ನು ತಕ್ಷಣ ಆಸ್ಪತ್ರೆಗೆ ತಲಪಿದರೂ ಜೀವ ಉಳಿಸಲಾಗಿಲ್ಲ. ಈ ಬಗ್ಗೆ ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
- Advertisement -