ಬೆಂಗಳೂರು: ವಿಜ್ಞಾನಿ ಎಂದು ಹೇಳಿಕೊಂಡು, ದೇಶ-ವಿದೇಶಿಗರು, ದೊಡ್ಡ ದೊಡ್ಡ ರಾಜಕಾರಣಿಗಳನ್ನು, ಮಾಧ್ಯಮಗಳನ್ನು ಯಾಮಾರಿಸಿ ತಲೆಮರೆಸಿಕೊಂಡಿದ್ದ ಡೋಂಗಿ ವಿಜ್ಞಾನಿ ಡ್ರೋನ್ ಪ್ರತಾಪ್ ಡ್ರೋನ್ ಪ್ರತಾಪ್ ಅಡಗಿ ಕೂತಿದ್ದ ಜಾಗವನ್ನು ಎಂದು ಕೊನೆಗೂ ಪೊಲೀಸರು ಕಂಡುಹಿಡಿದಿದ್ದಾರೆ.
ಕ್ವಾರಂಟೀನ್ ನಿಯಮ ಉಲ್ಲಂಘಿಸಿದ್ದಾರೆ ಅನ್ನೋ ಆರೋಪದಡಿ ಡ್ರೋಣ್ ಪ್ರತಾಪ್ ವಿರುದ್ಧ ದೂರು ದಾಖಲಾಗಿತ್ತು. ಆದ್ರೆ ಅವರು ಎಲ್ಲಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿರಲಿಲ್ಲ. ಸದ್ಯ ಡ್ರೋಣ್ ಪ್ರತಾಪ್ ಮೈಸೂರಿನಲ್ಲಿ ಪತ್ತೆಯಾಗಿದ್ದಾರೆ. ಮೈಸೂರಿನಲ್ಲಿ ಕ್ವಾರಂಟೀನ್ ಇರುತ್ತೇನೆ ಎಂದು ಪ್ರತಾಪ್ ಅಲ್ಲೇ ಉಳಿದ್ದಿದ್ದು, ಪ್ರತಾಪ್ ಕರೆತರಲು ಬಿಬಿಎಂಪಿ ಸಿಬ್ಬಂದಿ ಮತ್ತು ಪೊಲೀಸರು ಮೈಸೂರಿಗೆ ಹೊರಟ್ಟಿದ್ದಾರೆ.
ಬೆಂಗಳೂರಿನಲ್ಲಿ ಕ್ವಾರಂಟೀನ್ ಇರುವಂತೆ ಅಧಿಕಾರಿಗಳು ಪ್ರತಾಪ್ಗೆ ಸೂಚನೆ ನೀಡಿದ್ದಾರೆ. ಅಲ್ಲದೇ ಆತನನ್ನು ಮೈಸೂರಿನಿಂದ ಕರೆ ತಂದು ಸಾಂಸ್ಥಿಕ ಕ್ವಾರಂಟೀನ್ ಮಾಡಲು ಬಿಬಿಎಂಪಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಇನ್ನು ಕ್ವಾರಂಟೀನ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಪ್ರತಾಪ್ ವಿರುದ್ಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.