- Advertisement -
- Advertisement -
ಬಂಟ್ವಾಳ : ನಾಪತ್ತೆಯಾಗಿದ್ದ ಪಿಯು ವಿದ್ಯಾರ್ಥಿ ದಿಗಂತ್ ಮಾ.8 ರಂದು ಉಡುಪಿಯ ಡಿ ಮಾರ್ಟ್ ಮಾಲ್ ನಲ್ಲಿ ಪತ್ತೆಯಾಗಿದ್ದ ಪ್ರಕರಣ ಸಂಬಂಧ ದಿಗಂತ್ ನನ್ನು ಉಡುಪಿಯಿಂದ ನೇರ ರಾತ್ರಿ ಮಂಗಳೂರು ಎಸ್ಪಿ ಕಚೇರಿಗೆ ಕರೆತಂದಿದ್ದು, ನಾಪತ್ತೆಯಾಗಲು ಕಾರಣ ತಿಳಿಯಲು ದಿಗಂತ್ ಜೊತೆ ಎಸ್ಪಿ ಖುದ್ದು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಎಸ್ಪಿ ಕಚೇರಿಯಲ್ಲಿ ಮಾಹಿತಿ ಕಲೆ ಹಾಕಿದ ಬಳಿಕ ನಾಪತ್ತೆ ಪ್ರಕರಣ ದಾಖಲಾದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆತಂದು ತನಿಖಾಧಿಕಾರಿಗಳ ಮುಂದೆ ಹೇಳಿಕೆ ಪಡೆದುಕೊಂಡು ನಾಪತ್ತೆ ಪ್ರಕರಣ ಕೇಸ್ ಪೈಲ್ ಅಂತ್ಯ ಮಾಡಲಿದ್ದಾರೆ. ದಿಗಂತ್ ನಾಪತ್ತೆಯಾಗಿರುವ ಬಗ್ಗೆ ಸಂಪೂರ್ಣ ತನಿಖೆ ನಡೆಸಿದ ಬಳಿಕ ನಾಪತ್ತೆ ರಹಸ್ಯವನ್ನು ಎಸ್ಪಿ ಮಾಧ್ಯಮಗೋಷ್ಠಿ ಮೂಲಕ ತಿಳಿಸಲಿದ್ದಾರೆ ಎನ್ನಲಾಗಿದೆ.
- Advertisement -