ಮಣಿಪಾಲ: ಶಿವಪಾಡಿ ವೈಭವ ಆಚರಣ ಸಮಿತಿ ಹಾಗೂ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ ವಠಾರದಲ್ಲಿ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಫೆ. 22ರಿಂದ 26ರ ವರೆಗೆ “ಶಿವಪಾಡಿ ವೈಭವ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಕೆ. ರಘುಪತಿ ಭಟ್ ತಿಳಿಸಿದರು.
ಅವರು ಈ ಕುರಿತಂತೆ ದೇವಸ್ಥಾನದ ಶ್ರೀ ರಮಾನಂದ ಸ್ಮತಿ ಮಂಟಪದಲ್ಲಿ ಮಾಹಿತಿ ನೀಡಿ, “ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಫೆ. 22ರ ಸಂಜೆ 4ಕ್ಕೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮಾಹೆ ವಿ.ವಿ. ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸುವರು. ಫೆ. 22ರಿಂದ 26ರ ವರೆಗೆ ಯಕ್ಷಗಾನ, ಕೃಷಿ, ಆಹಾರ, ಆರೋಗ್ಯ, ಮನೋರಂಜನೆ ಮೇಳಗಳು ಇರಲಿವೆ. ಕಾರ್ಯಕ್ರಮದಲ್ಲಿ 50 ಮಂದಿ ಕೃಷಿ ಸಾಧಕರನ್ನು ಫೆ. 22ರ ಕೃಷಿ ಮೇಳದಲ್ಲಿ ಸಮ್ಮಾನಿಸಲಾಗುವುದು,” ಎಂದರು.
ಐದು ದಿನಗಳ ಕೃಷಿ ಮೇಳದಲ್ಲಿ ಕೃಷಿ ಗೋಷ್ಠಿ, ವಸ್ತು ಪ್ರದರ್ಶನ, 250ಕ್ಕೂ ಹೆಚ್ಚು ಕೃಷಿ ಮಳಿಗೆಗಳು ತೆರೆಯಲ್ಪಡುತ್ತವೆ. ಯಕ್ಷಮೇಳದಲ್ಲಿ ಐದು ದಿನ ರಾತ್ರಿ ವಿವಿಧ ಮೇಳಗಳ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಫೆ. 22ರಿಂದ 25ರ ತನಕ ಪ್ರತಿದಿನ 7.30ರಿಂದ, 26ರ ರಾತ್ರಿ 9.30ರಿಂದ ವಿವಿಧ ಮೇಳದವರಿಂದ ಯಕ್ಷಗಾನ ಪ್ರದರ್ಶನ ಜರಗಲಿವೆ ಎಂದು ತಿಳಿಸಿದರು.