Sunday, August 30, 2026
Homeಅಪರಾಧಖಾಸಗಿ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಮಣ್ಣು ಅಗೆದ ಘಟನೆ: ಖಾಸಗಿ ಕಂಪನಿ ವಿರುದ್ದ ದೂರು...

ಖಾಸಗಿ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಮಣ್ಣು ಅಗೆದ ಘಟನೆ: ಖಾಸಗಿ ಕಂಪನಿ ವಿರುದ್ದ ದೂರು ದಾಖಲು

- Advertisement -
- Advertisement -

ಬಂಟ್ವಾಳ: ಕೆ.ಎನ್.ಆರ್‌.ಸಿ‌.ಕಂಪನಿಯ ಅಧಿಕಾರಿಗಳು ಖಾಸಗಿ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಮಣ್ಣು ಅಗೆದು ನಷ್ಟ ಮಾಡಿದ್ದಾರೆ ಎಂದು ವಿರುದ್ದ ಬಂಟ್ವಾಳ ‌ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

‌ಕೆ.ಎನ್.ಆರ್‌.ಸಿ‌.ಕಂಪನಿಯು ರಾಷ್ಟ್ರೀಯ ಹೆದ್ದಾರಿ ಬಿಸಿರೋಡು- ಅಡ್ಡಹೊಳೆ ಚತುಷ್ಪತ ರಸ್ತೆಯ ಕಾಮಗಾರಿಯನ್ನ ನಡೆಸುತ್ತಿದ್ದು, ಕಂಪನಿಯ ಅಧಿಕಾರಿಗಳಾದ ಪಿ.ಆರ್.ಒ.ನಂದಕುಮಾರ್ ಮತ್ತು ಸೈಟ್ ಇಂಜಿನಿಯರ್ ನಿತಿನ್ ಅರು ಮೆಲ್ಕಾರ್ ಹೆದ್ದಾರಿ ಬದಿಯಲ್ಲಿ ಬಾಡಿಗೆಗೆ ಇದ್ದ ಹಳೇಯ ಸಂಚಾರ ಪೋಲೀಸ್ ಠಾಣೆಯ ಸುತ್ತ ಮಣ್ಣು ಅಗೆದಿದ್ದು, ಇವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಖಾಸಗಿ ಜಮೀನಿನ ಮಾಲಕ ಅಬ್ದುಲ್ ಖಾದರ್ ಒತ್ತಾಯ ಮಾಡಿದ್ದಾರೆ.

- Advertisement -

Latest News

error: Content is protected !!