- Advertisement -
- Advertisement -
ಉಡುಪಿ; ಆರು ಜನ ನಕ್ಸಲರು ಸರ್ಕಾರಕ್ಕೆ ಕಾಣಲಿಲ್ಲ, ಇದರ ಬದಲಾಗಿ ಸರ್ಕಾರವೇ ನಕ್ಸಲರಿಗೆ ಶರಣಾದಂತೆ ಭಾಸವಾಯಿತು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಈ ಕುರಿತಂತೆ ಶನಿವಾರದಂದು ಸುದ್ದಿಗಾರರೊಂದಿಗೆ ಮಾತನಾಡಿ, ‘ನಕ್ಸಲರು ಶಸ್ತ್ರಾಸ್ತಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಬಂದರೆ ಅವರನ್ನು ಸ್ವೀಕರಿಸುವುದು ಯಾವುದೇ ರೀತಿಯಲ್ಲು ತಪ್ಪಲ್ಲ. ಆದರೆ ಶರಣಾದ ಮೇಲೆ ಸೌಲಭ್ಯಗಳ ವಿತರಣೆ ಮಾಡಿರುವುದು ತಪ್ಪು. ಏಕೆಂದರೆ ಈ ಹಿಂದೆ ಶರಣಾದವರಿಗೆ ಸೌಲಭ್ಯಗಳು ಲಭಿಸಿಲ್ಲ. ಅಲ್ಲದೆ ನಕ್ಸಲ್ ಪೀಡಿತ ಪ್ರದೇಶದ ಜನರಿಗೆ ಮೂಲ ಸೌಲಭ್ಯಗಳನ್ನು ಒದಗಿಸುವ ಕಾರ್ಯಗಳು ನಡೆದಿಲ್ಲ. ಈ ಒಂದು ಬೆಳವಣಿಗೆಯಿಂದ ನಕ್ಸಲರು ಹೆಚ್ಚಾಗುವ ಆತಂಕವೂ ಕಾಡುತ್ತಿದೆ,’ ಎಂದು ಹೇಳಿದರು.
- Advertisement -